Thursday, June 19, 2025
Google search engine
Homeರಾಜ್ಯಬೆಂಗಳೂರು ಸುತ್ತ ಸ್ಯಾಟಲೈಟ್ ಟೌನ್​ಶಿಪ್​ಗೆ ಸಂಪುಟ ಸಮ್ಮತಿ: ಏನಿದರ ಉದ್ದೇಶ, ಪ್ರಯೋಜನ? ಇಲ್ಲಿದೆ ಮಾಹಿತಿ
spot_img

ಬೆಂಗಳೂರು ಸುತ್ತ ಸ್ಯಾಟಲೈಟ್ ಟೌನ್​ಶಿಪ್​ಗೆ ಸಂಪುಟ ಸಮ್ಮತಿ: ಏನಿದರ ಉದ್ದೇಶ, ಪ್ರಯೋಜನ? ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಂಗಳೂರಿನ ಜನದಟ್ಟಣೆಯನ್ನು ಕಡಿಮೆ ಮಾಡುವುದು ಮತ್ತು ನಗರದ ಹೊರವಲಯಗಳ ಪ್ರದೇಶಗಳಲ್ಲಿನ ಭೂಮಿಯ ಮೌಲ್ಯವನ್ನು ಹೆಚ್ಚಿಸುವ ಉದ್ದೇಶದೊಂದಿಗೆ ಸ್ಯಾಟಲೈಟ್ ಟೌನ್​ಶಿಪ್​ಗಳನ್ನು ಅಭಿವೃದ್ಧಿ ಪಡಿಸುವ “ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ” ಅನುಷ್ಠಾನಕ್ಕೆ ಕರ್ನಾಟಕದ ಸಚಿವ ಸಂಪುಟ ಅನುಮೋದನೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಬಿಡದಿ ಹೋಬಳಿ, ರಾಮನಗರ ತಾಲೂಕು, ರಾಮನಗರ ಜಿಲ್ಲೆ, ಬೈರಮಂಗಲ, ಬೆನ್ನಿಗೆರೆ, ಹೊಸೂರು, ಕೆಜಿ ಗೊಲ್ಲರಪಾಳ್ಯ, ಕಂಚುಗಾರನಹಳ್ಳಿ, ಅರಳಾಲುಸಂದ್ರ, ಕೆಂಪಯ್ಯನ ಪಾಳ್ಯ, ಕಂಚುಗಾರನಹಳ್ಳಿ ಕಾವಲು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸ್ಯಾಟಲೈಟ್ ಟೌನ್​ಶಿಪ್ ಯೋಜನೆ ಅನುಷ್ಠಾನ ಮಾಡಲಾಗುವುದು ಎಂದು ಕಾನೂನು ಸಚಿವ ಹೆಚ್​​​ಕೆ ಪಾಟೀಲ್ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದರು.

ಬೆಂಗಳೂರಿನಲ್ಲಿ ಜನಸಂಖ್ಯಾ ಸಾಂಧ್ರತೆಯನ್ನು ಕಡಿಮೆ ಮಾಡಲು ದೇವನಹಳ್ಳಿ, ನೆಲಮಂಗಲ, ಹೊಸಕೋಟೆ, ದೊಡ್ಡಬಲ್ಲಾಪುರ, ಮಾಗಡಿ ಮತ್ತು ಬಿಡದಿಯಂತಹ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ರಸ್ತೆ ಮತ್ತು ರೈಲ್ವೆ ಸೌಲಭ್ಯಗಳೊಂದಿಗೆ ಸ್ಯಾಟಲೈಟ್ ಟೌನ್​ಶಿಪ್​ಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಸ್ಯಾಟಲೈಟ್ ಟೌನ್​ಶಿಪ್ ಎಂದರೇನು?

ಸ್ಯಾಟಲೈಟ್ ಟೌನ್​ಶಿಪ್ ಎಂಬುದು ವಸತಿ ಮತ್ತು ಉದ್ಯೋಗವನ್ನು ಒದಗಿಸುವ ಉದ್ದೇಶದೊಂದಿಗೆ ದೊಡ್ಡ ದೊಡ್ಡ ನಗರಗಳ ಬಳಿ ನಿರ್ಮಿಸಲಾಗುವ ಪಟ್ಟಣಗಳಾಗಿವೆ. ಸ್ಯಾಟಲೈಟ್ ಟೌನ್​ಶಿಪ್​ಗಳನ್ನು ಸ್ಯಾಟಲೈಟ್ ಸಿಟಿಗಳು ಎಂದೂ ಕರೆಯಲಾಗುತ್ತದೆ.

ಸ್ಯಾಟಲೈಟ್ ಟೌನ್​ಶಿಪ್ ಉದ್ದೇಶಗಳೇನು?

ಮಹಾನಗರಗಳಲ್ಲಿ ಹೆಚ್ಚುವರಿ ಜನಸಂಖ್ಯೆಯ ಸಮಸ್ಯೆಗೆ ಕಡಿವಾಣ ಹಾಕುವುದರ ಜತೆಗೆ ಜನ ಸಾಂಧ್ರತೆಯನ್ನು ಕಡಿಮೆ ಮಾಡುವುದು ಸ್ಯಾಟಲೈಟ್ ಟೌನ್​ಶಿಪ್​​ನ ಮುಖ್ಯ ಉದ್ದೇಶವಾಗಿದೆ. ಸ್ಯಾಟಲೈಟ್ ಟೌನ್​ಶಿಪ್​ಗಳು ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತವೆ. ಒಂದು ಪ್ರದೇಶದಲ್ಲಿ ಸಂಪನ್ಮೂಲವನ್ನು ಸಮನಾಗಿ ವಿತರಣೆ ಮಾಡಲು ಕೂಡ ಸ್ಯಾಟಲೈಟ್ ಟೌನ್​ಶಿಪ್​ಗಳಿಂದ ಸಾಧ್ಯವಾಗುತ್ತದೆ.

RELATED ARTICLES
- Advertisment -spot_img

Most Popular

error: Content is protected !!