Thursday, June 19, 2025
Google search engine
Homeಕ್ರೈಂಗಂಡನಿಂದಲೇ ಹೆಂಡತಿ, ಮಗಳ ಬರ್ಬರ ಹತ್ಯೆ! ಮಚ್ಚಿನೊಂದಿಗೆ ಪೊಲೀಸರಿಗೆ ಶರಣಾದ ಆರೋಪಿ..!
spot_img

ಗಂಡನಿಂದಲೇ ಹೆಂಡತಿ, ಮಗಳ ಬರ್ಬರ ಹತ್ಯೆ! ಮಚ್ಚಿನೊಂದಿಗೆ ಪೊಲೀಸರಿಗೆ ಶರಣಾದ ಆರೋಪಿ..!

ಟ್ರಾಫಿಕ್‌‌ ಹೋಮ್‌ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಗಂಗರಾಜು ಎಂಬಾತ ಮೂಲತಃ ಇವರು ನೆಲಮಂಗಲದವರು. ಕಳೆದ 6 ವರ್ಷದಿಂದ ಬಾಡಿಗೆ ಮನೆಯಲ್ಲಿ ಜಾಲಹಳ್ಳಿ ಕ್ರಾಸ್‌ ಬಳಿ ವಾಸವಾಗಿದ್ದರು. ಇಂದು ಏಕಾಏಕಿ ಗಂಗರಾಜು ತನ್ನ ಹೆಂಡತಿ ಭಾಗ್ಯಮ್ಮ ಜೊತೆಗೆ ಮಗಳು ನವ್ಯಾ ಮತ್ತು ಸಂಬಂಧಿ ಹೇಮಾವತಿ ಎಂಬವರನ್ನ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಬೆಂಗಳೂರು: ಗಂಡ-ಹೆಂಡತಿ (Husband-Wife) ಪ್ರೀತಿ ಬಹಳ ಅಮೂಲ್ಯ. ಅಂತದ್ರಲ್ಲಿ ಇಲ್ಲೊಬ್ಬ ಗಂಡ ಹೆಂಡತಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಅದೂ ಹೆಂಡತಿಯ ಶೀಲಶಂಕಿಸಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಗಂಗರಾಜು (Gangaraju) ಎಂಬಾತ ತನ್ನ ಮಡದಿಯನ್ನೇ ಕೊಲೆಗೈದು, ಜೊತೆಗೆ ತನ್ನ ಮಗಳು ಮತ್ತು ಸಂಬಂಧೀಯನ್ನೇ ಭೀಕರವಾಗಿ ಹತ್ಯೆ (Murder) ಮಾಡಿರುವ ಪ್ರಕರಣ ಇದೀಗ ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ ಬಳಿ ಬೆಳಕಿಗೆ ಬಂದಿದೆ.

ಗಂಡನಿಂದಲೇ ಹೆಂಡತಿಯ ಬರ್ಬರ ಹತ್ಯೆ!

ಟ್ರಾಫಿಕ್‌‌ ಹೋಮ್‌ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಗಂಗರಾಜು ಎಂಬಾತ ಮೂಲತಃ ಇವರು ನೆಲಮಂಗಲದವರು. ಕಳೆದ 6 ವರ್ಷದಿಂದ ಬಾಡಿಗೆ ಮನೆಯಲ್ಲಿ ಜಾಲಹಳ್ಳಿ ಕ್ರಾಸ್‌ ಬಳಿ ವಾಸವಾಗಿದ್ದರು. ಇಂದು ಏಕಾಏಕಿ ಗಂಗರಾಜು ತನ್ನ ಹೆಂಡತಿ ಭಾಗ್ಯಮ್ಮ ಜೊತೆಗೆ ಮಗಳು ನವ್ಯಾ ಮತ್ತು ಸಂಬಂಧಿ ಹೇಮಾವತಿ ಎಂಬವರನ್ನ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಇಂದು ಓಂ ಶಕ್ತಿ ಮಾಲೆ ಹಾಕಲು ಸಿದ್ದತೆ ನಡೆಸಿದ್ದರಂತೆ ಮೃತ ಭಾಗ್ಯಮ್ಮ. ಈ ನಡುವೆಯೂ ಬೆಳಗ್ಗೆ ಮನೆಯಲ್ಲಿ ಜೋರು ಗಲಾಟೆ ನಡೆದಿದೆ ಎನ್ನಲಾಗಿದ್ದು, ಇದರಿಂದ ಬೆಳಗ್ಗೆಯೇ ಹೊಯ್ಸಳ ಪೊಲೀಸರು ಮನೆಗೆ ಬಂದು ಗಂಗರಾಜು ಮತ್ತು ಮಹಿಳೆಗೆ ಬುದ್ಧಿ ಹೇಳಿದ್ದರಂತೆ. ಆದರೆ ಸಂಜೆಯಾಗುತ್ತಿದ್ದಂತೆ ಮತ್ತೆ ಈ ಗಲಾಟೆ ಜೋರಾಗಿ ಭೀಕರ ಘಟನೆ ನಡೆದೇ ಹೋಗಿದೆ.

                      ಆರೋಪಿ ಗಂಗರಾಜು

ಮಚ್ಚಿನ ಜೊತೆಯೇ ಶರಣಾದ ಆರೋಪಿ!

ಇನ್ನು ಈ ಕೊಲೆ ಹಿಂದಿನ ಕಾರಣ ಸದ್ಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅತ್ತ ಹೆಂಡತಿ, ಇಬ್ಬರು ಯುವತಿಯರನ್ನು ಕೊಲೆ ಮಾಡಿದ್ದಲ್ಲದೇ ಆತನೇ ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಇನ್ನು ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ಇನ್ನು ಪೀಣ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಮಚ್ವಿನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ ಗಂಗರಾಜು, ಇಬ್ಬರು ಹೆಣ್ಣುಮಕ್ಕಳ ರುಂಡ ಮುಂಡವನ್ನೇ ಬೇರ್ಪಡಿಸಿ, ಅಡುಗೆ ಮನೆಯಲ್ಲಿ ಬಿಸಾಡಿದ್ದಾನೆ ಎನ್ನಲಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪ್ರಕರಣದ ತನಿಖೆ ಶುರು ಮಾಡಿದ್ದಾರೆ.

ಪೊಲೀಸ್ ಆಯುಕ್ತರು ಹೇಳಿದ್ದೇನು?

ಇನ್ನು ಸ್ಥಳಕ್ಕೆ ಧಾವಿಸಿದ ಪಶ್ಚಿಮ ವಲಯ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ಮಾತನಾಡಿದ್ದು, ಇವತ್ತು ಸಂಜೆ 5 ಗಂಟೆಗೆ 112 ಗೆ ಕರೆ ಬಂದಿತ್ತು. ಸ್ಥಳಕ್ಕೆ ಹೊಯ್ಸಳ ಬಂದು ಪರಿಶೀಲಿಸಿದ್ದಾರೆ. ಈ ವೇಳೆ ಮೂವರು ಹೆಂಗಸರ ಕೊಲೆ ನಡೆದಿರೋದು ಪತ್ತೆಯಾಗಿದೆ. ಇನ್ನು ಎಲ್ಲರನ್ನೂ ಒಂದೇ ಕೊಣೆಯಲ್ಲಿ ಕೊಲೆ ಮಾಡಲಾಗಿದೆ. ಸದ್ಯ ಯಾಕೆ ಕೊಲೆ ಮಾಡಿದ್ದಾರೆ ಎಂಬ ಬಗ್ಗೆ ವಿಚಾರಣೆ ಮಾಡಲಾಗುತ್ತೆ ಎಂದು ಹೇಳಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!