Sunday, October 12, 2025
Google search engine
Homeಜಿಲ್ಲಾಭಾಷೆ ವಿಚಾರಕ್ಕೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗದ್ದಲ
spot_img

ಭಾಷೆ ವಿಚಾರಕ್ಕೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗದ್ದಲ

ಬೆಳಗಾವಿ: ಕನ್ನಡ ಮತ್ತು ಮರಾಠಿ ಭಾಷೆ ವಿಚಾರಕ್ಕೆ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗದ್ದಲ ಆಗಿರೋ ಘಟನೆ ಗುರುವಾರ ನಡೆದಿದೆ.‌

ರಾಜ್ಯ ಸರ್ಕಾರದ ಕನ್ನಡ ಕಡ್ಡಾಯ ಆದೇಶಕ್ಕೆ ಎಂಇಎಸ್ ಸದಸ್ಯ ರವಿ ಸಾಳುಂಕೆ ಆಕ್ಷೇಪ ವ್ಯಕ್ತಪಡಿಸಿದ್ದಾನೆ. ಸಭೆ ಆರಂಭವಾಗ್ತಿದ್ದಂತೆ ಸಭೆಯ ಕಾರ್ಯಸೂಚಿ ಮರಾಠಿ ಭಾಷೆಯಲ್ಲಿ ನೀಡುವಂತೆ ಕಿರಿಕ್ ಮಾಡಿದ್ದಾನೆ.

ಪಾಲಿಕೆ ಆಯುಕ್ತೆ ಶುಭ ಅವರ ಕನ್ನಡ ಕಡ್ಡಾಯ ಅನುಷ್ಠಾನ ಮಾಡಿದ್ದು, ಇದಕ್ಕೆ ಎಂಇಎಸ್ ವಿರೋಧ ವ್ಯಕ್ತಪಡಿಸಿದೆ. ಎಂಇಎಸ್ ಸದಸ್ಯ ಸಾಳುಂಕೆ ವಿರುದ್ಧ ಬಿಜೆಪಿ ಹಾಗೂ ನಾಮನಿರ್ದೇಶನ ಸದಸ್ಯರು ವಾಗ್ದಾಳಿ ನಡೆಸಿದ್ದಾರೆ.

ಪಾಲಿಕೆ ನಾಮನಿರ್ದೇಶನ ಸದಸ್ಯ ರಮೇಶ್ ಸೊಂಟಕ್ಕಿಯಿಂದ ಎಂಇಎಸ್ ಸದಸ್ಯನಿಗೆ ತರಾಟೆ ತಗೆದುಕೊಳ್ಳಲಾಗಿದೆ. ಇದು ಕರ್ನಾಟಕ ಇಲ್ಲಿ ಕನ್ನಡವೇ ಆಡಳಿತ ಭಾಷೆ. ಮರಾಠಿ ಭಾಷೆ ಬೇಕಿದ್ದರೆ ರವಿ ಸಾಳುಂಕೆ ಮಹಾರಾಷ್ಟ್ರಕ್ಕೆ ಹೋಗಲಿ. ಕಿರಿಕ್ ಮಾಡಿದ ಎಂಇಎಸ್ ‌ಸದಸ್ಯನ ವಿರುದ್ಧ ಪಾಲಿಕೆಯ ಎರಡು ಪಕ್ಷದ ಸದಸ್ಯರು ಕ್ರಮಕ್ಕೆ  ಮೇಯರ್ ಮಂಗೇಶ್ ಪವಾರ್‌ಗೆ ಒತ್ತಾಯಿಸಿದ ಒತ್ತಾಯಿಸಿದ್ದಾರೆ.

ಸಾಮಾನ್ಯ ಸಭೆಯಿಂದ ಎಂಇಎಸ್ ಸದಸ್ಯ ರವಿ ಸಾಳುಂಕೆ ಅಮಾನತು ಗೊಳಿಸಲು ಒತ್ತಾಯ ಕೇಳಿ ಬರುತ್ತಿದ್ದಂತೆ, ಪಾಲಿಕೆಯಲ್ಲಿ ಗದ್ದಲ‌ ಆರಂಭ ಆಗುತ್ತಿದ್ದಂತೆ ಮೇಯರ್ ಮಂಗೇಶ ಪವಾರ್ ಅವರು ಸಭೆ ಮುಂದೂಡಿದ್ದಾರೆ.‌

RELATED ARTICLES
- Advertisment -spot_img

Most Popular

error: Content is protected !!