Monday, June 23, 2025
Google search engine
Homeರಾಜಕೀಯಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರ ಇಲ್ಲ: ಸಿ.ಟಿ.ರವಿ
spot_img

ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರ ಇಲ್ಲ: ಸಿ.ಟಿ.ರವಿ

filter: 0; fileterIntensity: 0.0; filterMask: 0; captureOrientation: 0;
algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 38;

ಬೆಳಗಾವಿ: ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯುವ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರವನ್ನು ದುರ್ಬೀನ್ ಹಾಕಿ ಹಿಡಿಯುವ ಅವಶ್ಯಕತೆ ಇಲ್ಲ. ಅದೇರೀತಿ ಭ್ರಷ್ಟಾಚಾರ ಬಿಟ್ಟು ಕಾಂಗ್ರೆಸ್ ಇಲ್ಲ. ಕಾಂಗ್ರೆಸ್ ಬಿಟ್ಟು ಭ್ರಷ್ಟಾಚಾರ ಇಲ್ಲ ಎಂದು  ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಕಿಡಿಕಾರಿದರು.

 ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹಣ ಕೊಟ್ಟರೆ ಮಾತ್ರ ಮನೆ ಎಂದು ಬಿ.ಆರ್.ಪಾಟೀಲ ಅವರು ಹೇಳಿರುವುದು. ಅಂಗೈ ಹುಣ್ಣಿನಷ್ಟೇ ಸ್ಪಷ್ಟವಾಗಿದೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬಿ.ಆರ್.ಪಾಟೀಲ ಅವರನ್ನು ಕರೆದು ಮಾತನಾಡಲು ಇದು ಖಾಸಗಿ ವಿಷಯ ಅಲ್ಲ.‌ ಈ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಿಸಬೇಕು. ಅದಕ್ಕಿಂತ ಮೊದಲು ಜಮೀರ್ ಅಹ್ಮದ್ ರಾಜೀನಾಮೆ ಪಡೆಯಬೇಕು ಎಂದು ಆಗ್ರಹಿಸಿದರು.

ಕೇವಲ ಒಂದು ಇಲಾಖೆ ಅಷ್ಟೇ ಅಲ್ಲದೇ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಪಂಚ ಗ್ಯಾರಂಟಿ ಕೊಟ್ಟಿದ್ದೇವೆ ಅಂತಹೇಳಿ ಭ್ರಷ್ಟಾಚಾರಕ್ಕೆ ಲೈಸೆನ್ಸ್ ಅಂತಾ ಪರಿಗಣಿಸಿದ್ದಾರೆ. ಅಲ್ಲದೇ ಎಲ್ಲದಕ್ಕೂ ರೇಟ್ ಕಾರ್ಡ್ ಫಿಕ್ಸ್ ಮಾಡಿ ಬಿಟ್ಟಿದ್ದಾರೆ. ಹಾಗಾಗಿ, ಮೋಹನ್ ದಾಸ್ ಪೈ ಅವರು ಹೇಳಿದಂತೆ ಬಹಿರಂಗವಾಗಿ ರೇಟ್ ಕಾರ್ಡ್ ಹಾಕಿ ಬಿಡಿ. ಆಗ ಲಂಚ ಶಾಸನಬದ್ಧ ಆಗುತ್ತದೆ. ಇದರಿಂದ ಜನರು ಲಂಚ ಕೊಡಲು ಮಾನಸಿಕವಾಗಿ ಸಿದ್ಧರಾಗುತ್ತಾರೆ. ಲಂಚ ಕೊಟ್ಟರೆ ಮಾತ್ರ ಮನೆ ಎನ್ನುವ ಪಾಪಕ್ಕಿಂತ ದೊಡ್ಡ ಕೃತ್ಯ ಮತ್ತೊಂದಿಲ್ಲ ಎಂದು ಆರೋಪಿಸಿದರು.

ಅಭಿವೃದ್ಧಿ ಕೆಲಸ ಆಗುತ್ತಿಲ್ಲ ಅಂತಾ ನಾವು ಆರೋಪ ಮಾಡುತ್ತಿದ್ದೇವು. ಈಗ ನಯಾ ಪೈಸೆ ಕೆಲಸ ಆಗುತ್ತಿಲ್ಲ ಅಂತಾ ಬಹಿರಂಗವಾಗಿ ಧ್ವನಿ ಎತ್ತಿರುವ ರಾಜು ಕಾಗೆ ಬಿಜೆಪಿ ಶಾಸಕ ಅಲ್ಲ. ಅವರ ಕಾಂಗ್ರೆಸ್ ಪಕ್ಷದ ಶಾಸಕ. ನಾಮಕಾವಾಸ್ತಾ ಶಾಸಕರಾಗಿದ್ದು, ರಾಜೀನಾಮೆ ಕೊಡುವುದು ಸೂಕ್ತ ಅಂತಾ ರಾಜು ಕಾಗೆ ಹೇಳಿದ್ದಾರೆ. ಆದ್ದರಿಂದ ಅಭಿವೃದ್ಧಿ ಸಂಪೂರ್ಣ ನಿಂತು ಹೋಗಿದ್ದು, ಭ್ರಷ್ಟಾಚಾರ ಮಾತ್ರ ನಡೆಯುತ್ತಿದೆ. ಈ ಸರ್ಕಾರ ಬಂದ ಮೇಲೆ ಮಾಡಿದ ಘನಂದಾರಿ ಕೆಲಸ ಎಂದರೆ ಅದು ಬೆಲೆ ಏರಿಕೆ. ಆಡು ಮುಟ್ಟದ ಸೊಪ್ಪು ಇಲ್ಲ. ಕಾಂಗ್ರೆಸ್ ಬೆಲೆ ಏರಿಸದ ವಸ್ತುವೇ ಇಲ್ಲ ಎಂದು ಸಿ.ಟಿ.ರವಿ ಕಿಡಿಕಾರಿದರು.

ಎರಡು ವರ್ಷದಲ್ಲಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 26 ಕೋಟಿ ಅನುದಾನ ಕೊಟ್ಟಿದ್ದಾರೆ. ಆದರೆ, ಆ ಕಾಮಗಾರಿಗೂ ಕಾರ್ಯಾದೇಶ ಸಿಕ್ಕಿಲ್ಲ. ಅದರಲ್ಲೂ ಪರ್ಸೆಂಟೇಜ್ ಕಾಟ. ಹಾಗಾಗಿ, ಯಾವುದೇ ಕೆಲಸ ಆಗುತ್ತಿಲ್ಲ. ಇರುವ ಸತ್ಯವನ್ನೆ ರಾಜು ಕಾಗೆ ಹೇಳಿದ್ದಾರೆ. ಸತ್ಯ ಹೇಳಿದ್ದಕ್ಕೆ ರಾಜು ಕಾಗೆ ಮತ್ತು ಬಿ.ಆರ್.ಪಾಟೀಲ ಅವರು ಇನ್ನು ಏನೇನು ಅನುಭವಿಸಬೇಕಾಗುತ್ತೋ ಗೊತ್ತಿಲ್ಲ ಎಂದರು.

ಇನ್ನೂ ಮೂರು ವರ್ಷ ಇದೆ ಅವಲೋಕನ ಮಾಡಿಕೊಳ್ಳಿ. ಬೆಲೆ ಏರಿಕೆ, ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಉದ್ದಾರ ಮಾಡಲು ಸಾಧ್ಯವಿಲ್ಲ. ರಾಜ್ಯ ಹಾಳಾಗಿ ಹೋಗುತ್ತದೆ. ಆದರೆ, ನೀವು ಉದ್ದಾರ ಆಗಬಹುದು ಎಂದು ಸಿ.ಟಿ.ರವಿ ಕಾಂಗ್ರೆಸ್ ಸರ್ಕಾರವನ್ನು ಛೇಡಿಸಿದರು.

ವಿರೋಧ ಪಕ್ಷದವರು ಆರೋಪ ಮಾಡಿದರೆ ಪೂರ್ವಾಗ್ರಹ ಪೀಡಿತರಾಗಿ ಮಾತನಾಡುತ್ತಿದ್ದಾರೆ‌. ನಮ್ಮ ಮೇಲೆ ದ್ವೇಷ ಕಾರುತ್ತಿದ್ದಾರೆ ಎಂದು ಹೇಳುತ್ತಿದ್ದರು. ಆದರೆ, ಈಗ ಆಡಳಿತ ಪಕ್ಷದವರೇ ಭ್ರಷ್ಟಾಚಾರ ಮತ್ತು ಅಭಿವೃದ್ಧಿ ಆಗುತ್ತಿಲ್ಲ ಎಂದು ಹೇಳುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಆ ರೀತಿ ಹೇಳಲು ಆಗಲ್ಲ‌ ಎಂದು ಸಿ.ಟಿ‌.ರವಿ‌ ಲೇವಡಿ ಮಾಡಿದರು‌.

ಬಡವರಿಗೆ ಮನೆ ಕೊಡುವುದರಲ್ಲೂ ಭ್ರಷ್ಟಾಚಾರ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಮೊದಲ ಹಂತದಲ್ಲಿ ಗ್ರಾಮ ಪಂಚಾಯಿತಿ, ಬಳಿಕ ತಾಲ್ಲೂಕಾ ಪಂಚಾಯಿತಿ, ಜಿಲ್ಲಾ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳುತ್ತೇವೆ. ಅಂತಿಮವಾಗಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಚರ್ಚಿಸಿದ್ದೇವೆ ಎಂದು ಇದೇ ವೇಳೆ ಸಿ‌‌.ಟಿ‌.ರವಿ ತಿಳಿಸಿದರು.

RELATED ARTICLES
- Advertisment -spot_img

Most Popular

error: Content is protected !!