Saturday, June 21, 2025
Google search engine
Homeಜಿಲ್ಲಾಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಾಬೀತಾಗಿದೆ: ಸಂಸದ ಜಗದೀಶ್ ಶೆಟ್ಟರ್.
spot_img

ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಸಾಬೀತಾಗಿದೆ: ಸಂಸದ ಜಗದೀಶ್ ಶೆಟ್ಟರ್.

ಬೆಳಗಾವಿ:  ಕಾಂಗ್ರೆಸ್ ಶಾಸಕ ಬಿ‌ ಆರ್ ಪಾಟೀಲ್ ಆಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಸಂಸದ ಜಗದೀಶ್  ಶೆಟ್ಟರ್ ಪ್ರತಿಕ್ರಿಯೆ ನೀಡಿ ರಾಯರೆಡ್ಡಿ ದೊಡ್ಡ ಭ್ರಷ್ಟಾಚಾರ ಇದೆ ಎಂದು ಹೇಳಿದರು.

ಬಿ ಆರ್ ಪಾಟೀಲ್ ಜಮೀರ್ ಪಿಎ ಜೊತೆಗೆ ಮಾತನಾಡಿದ ಆಡಿಯೋ ಬಂದಿದೆ. ಶಿಫಾರಸ್ಸು ಮಾಡಿದವರನ್ನು ಬಿಟ್ಟು ಹಣ ಕೊಟ್ಟವರಿಗೆ ಮನೆ. ಹಣ ಕೊಟ್ಟರೇ ಎಲ್ಲಾ ಕೆಲಸ ಆಗುತ್ತೆ ಎನ್ನುವುದು ಗೊತ್ತಾಗುತ್ತದೆ. ಬಿಜೆಪಿ ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಿದ್ವಿ. ಈ ಸರ್ಕಾರದ ಭ್ರಷ್ಟಾಚಾರ ಈಗ ಫ್ರೂ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಕಂದಾಯ ಮಂತ್ರಿ ಬೈರೇಗೌಡ ತಹಶಿಲ್ದಾರ ಕಚೇರಿಗೆ ಭೇಟಿ ಕೊಟ್ಟಿದ್ದಾರೆ. ಹಣ ಕೊಟ್ಟವರ ಕೆಲಸ ಬೇಗ ಆಗುತ್ತೆ ಎಂದು ಸಾರ್ವಜನಿಕರ ದೂರು ನೀಡಿದ್ದು ತಹಶಿಲ್ದಾರ ಕಚೇರಿ ಈ ಕೆಲಸಕ್ಕೆ ಇಷ್ಟು ಹಣ ಎಂದು ಬೋರ್ಡ್ ಹಾಕಿ. ಸ್ವತಃ ಕಂದಾಯ ಸಚಿವರೇ ಇದನ್ನು ಹೇಳಿದ್ದಾರೆ.

ಮಂತ್ರಿ, ಬಿ ಆರ್ ಪಾಟೀಲ್ ಹೇಳಿಕೆ ನೋಡಿದ್ರೆ. ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿದೆ. ಸಿದ್ದರಾಮಯ್ಯ ಆಡಳಿತದಲ್ಲಿ ಹಿಡತ ಕಳೆದುಕೊಂಡಿದ್ದಾರೆ. ಆದಷ್ಟು ರಾಜೀನಾಮೆ ಕೊಟ್ಟು ಹೋಗುವುದು ಒಳ್ಳೆಯದು ಎಂದು ಒತ್ತಾಯಿಸಿದರು.

ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ ವಿಚಾರವಾಗಿ ಮಾತನಾಡಿದ ಅವರು ಷಾ ಭೇಟಿ ರಾಜಕೀಯ ಚರ್ಚೆ ನಡೆದಿಲ್ಲ.

ಗೊಂದಲ ನಿವಾರಣೆ ಆಗಿದೆ. ಇನ್ನೂ ಸಣ್ಣ ಪುಟ್ಟ ವಿಚಾರ ಇತ್ಯರ್ಥ ಆಗಲಿವೆ ಎಂದು ಸ್ಪಷ್ಟನೆ ನೀಡಿದರು.

RELATED ARTICLES
- Advertisment -spot_img

Most Popular

error: Content is protected !!