ಬೆಳಗಾವಿ : ಭಾರತೀಯ ಸೇನೆಯ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಯಶಸ್ವಿಯಾದ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಬೃಹತ್ ತಿರಂಗಾ ಯಾತ್ರೆ ನಡೆಸಿದರು.
ನಗರದ ಛತ್ರಪತಿ ಸಂಭಾಜಿ ಮಹಾರಾಜರ್ ಚೌಕನಿಂದ ಆರಂಭವಾದ ರ್ಯಾಲಿಯು ನರಗುಂದಕರ್ ಭಾವೆ ವೃತ್ತದವರೆಗೆ ಯಾತ್ರೆ ಬಂದು ಮುಕ್ತಾಯವಾಯಿತು.
ಭಾರತೀಯ ಸೈನಿಕರಿಗೆ ಬಲ ತುಂಬುವ ಉದ್ದೇಶದೊಂದಿಗೆ ತಿರಂಗಾ ಯಾತ್ರೆ ರಾಷ್ಟ್ರದ ಧ್ವಜ ಹಿಡಿದು ಸೈನಿಕರ ಪರವಾಗಿ ಜಯಘೋಷಗಳು ಮೊಳಗಿದವು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ರಾಜ್ಯ ಬಿಜೆಪಿ ವಕ್ತಾರ ಮುಖಂಡ ಎಂ.ಬಿ. ಜೀರಲಿ, ಮುರುಗೇಂದ್ರಗೌಡ ಪಾಟೀಲ, ಸೇರಿ ಮತ್ತಿತರರು ಪಾಲ್ಗೊಂಡಿದ್ದರು.