Thursday, June 19, 2025
Google search engine
Homeಜಿಲ್ಲಾಪ್ರತಿಯೊಬ್ಬರು ತಮ್ಮದೇ ಆದ ಕಲೆಯನ್ನ ಹೊಂದಿರುತ್ತಾರೆ ಅದನ್ನ ಗುರುತಿಸಬೇಕು:ವಿದ್ಯಾವತಿ ಭಜಂತ್ರಿ
spot_img

ಪ್ರತಿಯೊಬ್ಬರು ತಮ್ಮದೇ ಆದ ಕಲೆಯನ್ನ ಹೊಂದಿರುತ್ತಾರೆ ಅದನ್ನ ಗುರುತಿಸಬೇಕು:ವಿದ್ಯಾವತಿ ಭಜಂತ್ರಿ

 

: ನಗರದ ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು, ಹಾಗೂ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ, ವಿಶ್ವ ರಂಗಭೂಮಿ ದಿನಾಚರಣೆ 2025ನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು, ನಾಡಗೀತೆ ಯೊಂದಿಗೆ ಪ್ರಾರಂಭಿಸಿ, ಬೆಳಗಾವಿಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕರಾದ ಶ್ರೀಮತಿ ವಿದ್ಯಾವತಿ ಭಜಂತ್ರಿಯವರು ಉದ್ಘಾಟಿಸಿ ಮಾತನಾಡಿದ ಅವರು ಕಲೆಯು ಜೀವನವನ್ನು ಹೊರತಾಗಿ ಇರುವುದಿಲ್ಲ ಜೀವನವೇ ಕಳೆಯಾಗಿರುತ್ತದೆ. ಪ್ರತಿಯೊಬ್ಬರು ತಮ್ಮದೇ ಆದ ಕಲೆಯನ್ನ ಹೊಂದಿರುತ್ತಾರೆ ಅದನ್ನ ಗುರುತಿಸಬೇಕು. ವಿಶ್ವ ರಂಗಭೂಮಿ ದಿನಾಚರಣೆಯ ಮಹತ್ವದ ಕುರಿತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ತದನಂತರ, ಸಾಹಿತಿ ನಾಟಕಕಾರರಾದ ಥಿಯೊಡರಸ್ ಟರ್ಜೋಪೌಲಸ್ ರವರು ಬರೆದ ಈ ವರ್ಷದ ವಿಶ್ವ ರಂಗಭೂಮಿ ಸಂದೇಶವನ್ನು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾದ ಬಾಬಾ ಸಾಹೇಬ್ ಕಾಂಬಳೆ ಅವರು ಓದಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಿದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜಿನ ಪ್ರಚಾರ್ಯರಾದ ಪ್ರೊ.ಎಂ.ಜಿ ಹೆಗಡೆಯವರು ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ, ಗೋಕಾಕಿನ ಹಿರಿಯ ಸಾಹಿತಿಗಳು, ಪಾರಿಜಾತ ಕಲಾವಿದರಾದ ಈಶ್ವರ ಚಂದ್ರ ಬೆಟಗೇರಿ ಅವರು ಪಾರಿಜಾತದ ಪ್ರಾತೆಕ್ಷತೆಯನ್ನ ಪ್ರದರ್ಶಿಸಿದರು.

ನಂತರ, ಕಾರ್ಯಕ್ರಮದ ಇನ್ನೋರ್ವ ಅತಿಥಿಗಳಾದ ಬೆಳಗಾವಿಯ ಆರ್.ಪಿ.ಡಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ, ಡಾ.ಎಚ್.ಬಿ ಕೊಲಕಾರ ಇವರು ‘ಆಧುನಿಕ ಕನ್ನಡ ರಂಗಭೂಮಿಯ’ ಕುರಿತು ಸ್ವಾರಸ್ಯಕರವಾದ ಉಪನ್ಯಾಸವನ್ನ ನೀಡಿ ಕಲೆಯ ಉಗಮ, ರಂಗಭೂಮಿಯ ಸುದೀರ್ಘ ಇತಿಹಾಸ ಮತ್ತು ಆಧುನಿಕ ಯುಗದಲ್ಲಿ ಕನ್ನಡ ರಂಗಭೂಮಿಯ ನಿಲುವಿನ ಕುರಿತು ಮಾಹಿತಿ ನೀಡಿದರು.

ಮುಂದೆ, ರಂಗದರ್ಶನ ಕಲಾತಂಡ ದುಳಗಣವಾಡಿಯವರು, ಯಾರು ಹೊಣೆ? ಎಂಬ ಶೀರ್ಷಿಕೆಯ ಮೇಲೆ ಬೀದಿ ನಾಟಕವನ್ನ ಪ್ರದರ್ಶಿಸಿದರು. ಜೊತೆಗೆ ಬೆಳಗಾವಿ ಜಿಲ್ಲೆಯ ಕುರಿತು ಸುಶ್ರಾವ್ಯವಾಗಿ ಹಾಡಿದರು.

ಅದೇ ರೀತಿ, ಕಾರ್ಯಕ್ರಮದಲ್ಲಿ, ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಬೆಳಗಾವಿಯ ವಿದ್ಯಾರ್ಥಿಗಳು ಹಾಗೂ ಯುವರಂಗ ತಂಡದ ಕಲಾವಿದರು ಸುಮಧುರವಾಗಿ ರಂಗ ಗೀತೆಗಳನ್ನ ಹಾಡಿದರು.

ಇದೆ ಸಂದರ್ಭದಲ್ಲಿ, ರಂಗ ಸಂಪದದ ಹಿರಿಯ ರಂಗ ಸಂಘಟಕರಾದ ರಾಮಚಂದ್ರ ಕಟ್ಟಿ ಹಾಗೂ ಹಿರಿಯ ರಂಗ ಕಲಾವಿದರಾದ ರಮೇಶ ಅನಿಗಳ ಅವರಿಗೆ ರಂಗ ಗೌರವವನ್ನು ಸಲ್ಲಿಸಲಾಯಿತು.

ಇದೇ ಸಂದರ್ಭದಲ್ಲಿ, ಕಾಲೇಜಿನ ಅಧ್ಯಾಪಕ ವೃಂದ ಹಾಗೂ ಯುವರಂಗದ ಅಧ್ಯಕ್ಷರಾದ, ರಂಗಕರ್ಮಿಗಳಾದ ರಾಜು ಮಠಮತಿ, ಪತ್ರಕರ್ತರಾದ ಸ್ಟಿಫನ್ ಜೇಮ್ಸ್ ಅವರು ಉಪಸ್ಥಿತರಿದ್ದರು.

ಕೊನೆಯಲ್ಲಿ, ಬೆಳಗಾವಿಯ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಬಾಬಾ ಸಾಹೇಬ್ ಕಾಂಬಳೆ ಅವರು ವಂದನಾರ್ಪಣೆ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ವಿರಾಮ ನೀಡಿದರು.

ಕಾರ್ಯಕ್ರಮವನ್ನು ನಮ್ಮೂರ ಬಾನುಲಿ ಸಮುದಾಯದ ರೇಡಿಯೋ ಕೇಂದ್ರದ, ರೇಡಿಯೋ ನಿರೂಪಕರಾದ ಶ್ವೇತಾ ಬಿ.ಕೆ ಹಾಗೂ ಚೇತನ ಕುಲಕರ್ಣಿ ಅವರು ನಿರೂಪಿಸಿದರು.

RELATED ARTICLES
- Advertisment -spot_img

Most Popular

error: Content is protected !!