ಬೆಳಗಾವಿ: ಬಹುನಿರೀಕ್ಷಿತ ಜಿಲ್ಲಾ ಪಂಚಾಯತ್ ಚುನಾವಣೆ ವಿಚಾರ ಹೈಕೋರ್ಟ್ ನಲ್ಲಿ ಸರ್ಕಾರ ವಿರುದ್ಧದ ನ್ಯಾಯಾಂಗ ನಿಂದನೆ ಕೇಸ್ ಮುಗಿದಿದ್ದು . ಬರುವ ಮೇ 31ರೊಳಗೆ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿ ಕೊಡುವುದಾಗಿ ಹೇಳಿದು, ಮೀಸಲಾತಿ ಪಟ್ಟಿ ಕೊಡುತ್ತಿದ್ದಂತೆ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತೇವೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ ಎಸ್ ಸಂಗ್ರೇಶಿ ಹೇಳಿದರು.
ನಗರದಲ್ಲಿ ಮಾಧ್ಯಮ ಜೋತೆ ಮಾತನಾಡಿದ ಅವರು ಚುನಾವಣೆ ಯಾವಾಗ ನಡೆದ್ರೂ ಸಿದ್ಧತೆಯಲ್ಲಿ ನಾವು ಇದ್ದೇ ಇರುತ್ತೇವೆ, ಜಿಲ್ಲಾ ಚುನಾವಣಾಧಿಕಾರಿಗಳ ಜೊತೆ ಈಗಾಗಲೇ ಸಭೆ ನಡೆಸಿ ಮಾಹಿತಿ ಪಡೆದಿದ್ದೇವೆ. ಜಿಪಂ ಚುನಾವಣೆ ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆಸಲು ಚಿಂತನೆ ಇದೆ. ಚುನಾವಣೆ ಯಾವ ತಿಂಗಳಲ್ಲಿ ನಡೆಯುತ್ತೆ ಅಂತಾ ಹೇಳಲು ಆಗೊದಿಲ್ಲ, ಸರ್ಕಾರದಿಂದ ಮೀಸಲಾತಿ ಪಟ್ಟಿ ಕೊಟ್ಟನಂತರ ಎರಡು ತಿಂಗಳ ಸಮಯ ಬೇಕಾಗುತ್ತೆ ಎಂದರು.
ಚುನಾವಣೆಯಲ್ಲಿ ಇವಿಎಂ ಮೇಲೆ ಆರೋಪ ವಿರೋಧ ಪಕ್ಷಗಳ ಅನುಮಾನ ವಿಚಾರವಾಗಿ ಜಿಲ್ಲಾ ಪಂಚಾಯತ್ ಚುನಾವಣೆ ಬ್ಯಾಲೇಟ್ ಪೇಪರನಲ್ಲಿ ನಡೆಸಲು ಚಿಂತನೆ ಇದೆ, ಪೈನಲ್ ಆಗಿಲ್ಲ.
ಸರ್ಕಾರದಿಂದ ಮೇ ಒಳಗೆ ದಿನಾಂಕ ನಿಗದಿ ಆಗಬಹುದೆಂದು ನಾವು ನಿರೀಕ್ಷೆಯಲ್ಲಿದ್ದೇವೆ. ಸರ್ಕಾರ ಬಜೆಟ್ ನಲ್ಲಿ ಅಧಿಕಾರಿಗಳು ಭಾಗಿಯಾಗಿದ್ದರು ಎಂದರು.
ಡಿಸೆಂಬರ್ ಒಳಗೆ ಗ್ರಾಮ ಪಂಚಾಯತಿ ಚುನಾವಣೆ ಘೋಷಣೆ ವಿಚಾರಅದು ಬಂದಿದೆ ರಾಜ್ಯ ಐದು ಕಾರ್ಪೊರೇಷನ್ ಚುನಾವಣೆ ಮಾಡುತ್ತೇವೆ. ಶಿವಮೊಗ್ಗ,ದಾವಣಗೆರೆ, ತುಮಕೂರು,ಮಂಗಳೂರು, ಮೈಸೂರು, ಕಾರ್ಪೊರೇಷನ್ ಚುನಾವಣೆ ನಡೆಸಲು ಚಿಂತನೆ ಮಾಡುತ್ತಿದ್ದೇವೆ.ಯಾವುದೇ ಸಮಾಜಕ್ಕೆ ಅನ್ಯಾಯ ಆಗದಂತೆ ಸರ್ಕಾರ ಮೀಸಲಾತಿ ಪಟ್ಟಿ ಕೊಡುತ್ತೆ ಮೀಸಲಾತಿ ಪಟ್ಟಿ ಕೊಟ್ಟ ನಂತರ ಚುನಾವಣೆ ದಿನಾಂಕ ನಿಗದಿ ಪಡಿಸುತ್ತೇವೆ.ಆರು ತಿಂಗಳಲ್ಲಿ ಚುನಾವಣೆ ಮುಗಿದರೆ ಅಭಿವೃದ್ಧಿ ಕೆಲಸಕ್ಕೆ ಅನುಕೂಲ ಆಗುತ್ತೆ ಎಂದು ರಾಜ್ಯ ಚುನಾವಣಾ ಮುಖ್ಯ ಆಯುಕ್ತ ಜಿ.ಎಸ್.ಸಂಗ್ರೇಶಿ ಹೇಳಿದರು