ಬೆಳಗಾವಿ: ಕರ್ನಾಟಕ ಬಂದ್ ನಿಂದ ಯಾರಿಗೂ ತೊಂದರೆ ಆಗಬಾರದು. ಎಂಇಎಸ್ ನಿಷೇಧ ಮಾಡುವುದು ಪರಿಹಾರ ಅಲ್ಲ. ಮತ್ತೆ ಬೇರೆ ರೂಪದಲ್ಲಿ ಬರುತ್ತಾರೆ. ಅಧಿಕೃತವಾಗಿ ಎಂಇಎಸ್ ಎಲ್ಲಿದೆ ಗೊತ್ತಿಲ್ಲ. ಅಧಿಕೃತವಾಗಿ ಅದು ರಿಜಿಸ್ಟರ್ ಆಗಿಲ್ಲ ಅಂದ ಮೇಲೆ ಬ್ಯಾನ್ ಪ್ರಶ್ನೆ ಬರುವುದಿಲ್ಲ. ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದ ಕಾಂಗ್ರೆಸ್ ಕಚೇಯಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿ ಅವರು ಬೆಳಗಾವಿಯಲ್ಲಿ ಕನ್ನಡ, ಮರಾಠಿಗೂ ಬಹಳ ವ್ಯತ್ಯಾಸ ಆಗಿದೆ. ಶೇ. 10ರಷ್ಟು ಮಾತ್ರ ಎಂಇಎಸ್ ಅಸ್ತಿತ್ವ ಉಳಿದೆ ಎಂದರು.
ಮರಾಠಿಗರು ಮುಖ್ಯವಾಹಿನಿಗೆ ಬರಬೇಕು. ನರೇಗಾದಲ್ಲಿ ಹೆಚ್ಚು ಉದ್ಯೋಗ ಕೊಡುತ್ತೇವೆ. ಸರ್ಕಾರದ ಎಲ್ಲಾ ಲಾಭ ಎಲ್ಲರಿಗೂ ಅನಕೂಲ ಆಗಲಿದೆ. ಬೆಳಗಾವಿಯವರಿಗೆ ಎಷ್ಟು ಮೀಸಲಾತಿ ಕೊಡಲು ಸಾಧ್ಯ. ಕರ್ನಾಟಕ ಜನರಿಗೆ ಉದ್ಯೋಗದಲ್ಲಿ ಮೀಸಲಾತಿ ಕೊಡಲು ಆಗಲ್ಲ. ಜಿಲ್ಲಾಡಳಿತ, ಸರ್ಕಾರ ಈ ಯೋಜನೆ ಬಗ್ಗೆ ಗಮನಿಹರಿಸಬೇಕು. ಇನ್ನು ಗಡಿ ವಿವಾದ ಮುಗಿದ ಹೋದ ಅಧ್ಯಾಯ. ಪ್ರೇಮ ಇದ್ದರೆ ಅನುಕೂಲ ಮಾಡಲಿ ಅಷ್ಟೇ.
ಮರಾಠಿ ದಾಖಲೆ ಕೊಡುವುದನ್ನು ತಡೆಯಲು ಅಧಿಕಾರಿಗಳ ಜೊತೆಗೆ ಚರ್ಚಿಸುತ್ತೇನೆ ಎಂದು ಸತೀಶ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಕನ್ನಡ ಮರಾಠಿ ಭಾಷಿಕರ ಸಂಘರ್ಷ ಈಗಿಲ್ಲ. ಗಡಿ ವಿವಾದ ಮುಗಿದ ಅಧ್ಯಾಯ ಮರಾಠಿ ದಾಖಲೆ ಕೊಡುವುದನ್ನು ತಡೆಯಲು ಅಧಿಕಾರಿಗಳ ಜೊತೆಗೆ ಚರ್ಚೆ ಮಾಡ್ತಿವಿ.
ಪರಿಶಿಷ್ಟರು ಅಂತ ಅಲ್ಲ ಗರ್ಜಿಸುವ ಹುಲಿಗಳನ್ನು ಗುರಿ ಮಾಡುತ್ತಿದ್ದಾರೆ. ಗರ್ಜಿಸುವರಿಗೆ ಸಿಡಿ ತೋರಿಸುವ ಕೆಲಸ ಆಗುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಸ್ಪೋಟಕ್ ಹೇಳಿಕೆ ನೀಡಿದ್ದಾರೆ.
ಸಚಿವ ಕೆ.ಎನ್. ರಾಜಣ್ಣಗೆ ಹನಿಟ್ರ್ಯಾಪ್ ಯತ್ನ ಪ್ರಕರಣ ವಿಚಾರಕ್ಕೆ ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ ಅವರು, ದೂರು ಕೊಟ್ಟ ಮೇಲೆ ಮುಂದಿನ ತನಿಖೆ ಆಗಲಿದೆ. ರಾಜಣ್ಣ ದೂರು ಕೊಡುತ್ತಾರೆ ಇನ್ನೂ ಸಮಯವಿದೆ. ಇನ್ನೂ ಹೈಕಮಾಂಡ್ ಗೆ ನಾವೇನು ದೂರು ಕೊಡುವುದು. ಅವರೇ ದೂರು ತೆಗೆದುಕೊಳ್ಳಬೇಕು ಎಂದರು.
ಸಿಡಿ ಫ್ಯಾಕ್ಟರಿ ಎಲ್ಲಿದೆ ಎಂದು ಪೊಲೀಸರೇ ಪತ್ತೆ ಹಚ್ಚಬೇಕು. ಅದಕ್ಕಾಗಿ ರಾಜಣ್ಣ ಕಂಪ್ಲೇಟ್ ಕೊಡಬೇಕು. ತನಿಖೆಯಾದ ಮೇಲೆ ನಿರ್ಧಿಷ್ಟವಾಗಿ ಹೇಳಬಹುದು ಎಂದ ಸತೀಶ ಜಾರಕಿಹೊಳಿ, ಡಿಕೆಶಿ ವಿರುದ್ಧ ಮುನಿರತ್ನ ನೇರವಾಗಿ ಆರೋಪ ಮಾಡಿದ್ದಕ್ಕೆ, ಅವರು ಮಾಡಿದ್ದಾರೆ ಎಂದು ನಾವು ಮಾಡಲು ಆಗಲ್ಲ. ಪೊಲೀಸ್ ತನಿಖೆ ಆಗಲಿ. 40 ಜನ ಇರಬಹುದು ಎಂದು ಅಷ್ಟೇ ರಾಜಣ್ಣ ಹೇಳಿದ್ದಾರೆ ಎಂದರು.
ಹಾಯ್ ಅಂದ್ರೆ ನೀವು ಯಾಕೆ ಹಲೋ ಅಂತಿರಾ ಎಂಬ ಡಿಕೆಶಿ ಹೇಳಿಕೆಗೆ ವಿಲ್ ಪವರ್, ಅನುಭವ ಬದ್ದತೆಯ ಮೇಲೆ ಇದು ನಿರ್ಧಾರ ಆಗುತ್ತದೆ. ಒಂದು ಸಲ ಹಾಯ್ ಅಂದ್ರೆ ಅಟ್ರ್ಯಾಕ್ಟ್ ಆಗಿತ್ತು, ಎರಡನೇ ಸಲಕ್ಕೆ ಆಗುತ್ತಾ.
ಗಟ್ಟಿ ಇದ್ದರೆ ಆಗಲ್ಲ, ಸ್ವಲ್ಪ ವಿಕ್ನೆಸ್ ಇದ್ದರೆ ಒಂದೇ ಸಲಕ್ಕೆ ಮೊಬೈಲ್ ರಿಂಗ್ ಆಗಲು ಶುರು ಆಗುತ್ತದೆ. ಮೊದಲೇ ಹೆದರಿಕೆ ಇದ್ದರೆ 10 ಸಲ ಹಾಯ್ ಅಂದರು ಹಲೋ ಅನ್ನಲ್ಲ. ಹಾಯ್ ಎಂದರೆ ಹಾಯ್ ಅಂತಾರೆ ಯಾವ ದೃಷ್ಟಿಯಲ್ಲಿ ಹೇಳಿದ್ದಾರೆ ಗೊತ್ತಾಗಲ್ಲ ಎಂದು ಸತೀಶ ಜಾರಕಿಹೊಳಿ ಹೇಳಿದರು.
ನನ್ನ ಜೊತೆಗೆ ಅಲ್ಲ ವಕೀಲರು, ತಜ್ಞರ ಜೊತೆಗೆ ಚರ್ಚೆ ಮಾಡಿ ರಾಜಣ್ಣ ದೂರು ಕೊಡಬೇಕು. ರಾಜಣ್ಣಗೆ ದೂರು ಕೊಡಲು ಸಲಹೆ ಕೊಟ್ಟಿದು ಮಾತ್ರ ನಾನೇ. ಸೂತ್ರದಾರಿ ಯಾರು ಎಂಬುದು ಹೊರಬರಬೇಕು ಎಂದು ಸತೀಶ ಜಾರಕಿಹೊಳಿ ಅಭಿಪ್ರಾಯ ಪಟ್ಟರು.
ಯತ್ನಾಳ್ ಅವರಿಗೆ ಕಾಂಗ್ರೆಸ್ ನಾಯಕರಿಂದ ಚೀಟಿ ಬಗ್ಗೆಯತ್ನಾಳ್ ಚೀಟಿ ಕೊಟ್ಟರೆ ಮಾತನಾಡುತ್ತಾರಾ..? ಎಂದು ಪ್ರಶ್ನಿಸಿದ ಅವರು, ಸಿಬಿಐ ಯಾಕೆ ತನಿಖೆ ಮಾಡಬೇಕು ಎನ್ನುವುದಕ್ಕೆ ನಮ್ಮವರೇ ತನಿಖೆ ಮಾಡುತ್ತಾರೆ ಎಂದರು.
ಮಹಾನಾಯಕನ ಹೆಸರು ಪದೇ ಪದೇ ಪ್ರಸ್ತಾಪ ಆಗುತ್ತಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಯಾವ ತನಿಖೆ ಆಗಬೇಕು ಎಂದು ಸಿಎಂ ತೀರ್ಮಾನಿಸುತ್ತಾರೆ. ಕೆಲವು ಕಡೆ ರಾಜಕೀಯ ಇದೆ. ಬ್ಯುಸಿನೆಸ್, ಬ್ಲ್ಯಾಕ್ ಮೇಲ್ ಉದ್ದೇಶ ಇರುತ್ತದೆ. ತನಿಖೆ ಆಗೋವರೆಗೆ ಕಾಯಬೇಕಷ್ಟೇ ಎಂದು ಸತೀಶ ಜಾರಕಿಹೊಳಿ ಹೇಳಿದರು.