ರಾಯಬಾಗ: ವಕೀಲರ ಸಂಘದಿಂದ ನೂತನವಾಗಿ ನಿರ್ಮಾಣವಾಗುತ್ತಿರುವ ವಕೀಲರ ಭವನದ ಕಟ್ಟಡ ಕಾಮಗಾರಿಯನ್ನು ಸಂಸದೆ ಪ್ರಿಯಾಂಕಾ ಜಾರಕಿಹೊಳಿಯವರು ಇಂದು ವೀಕ್ಷಣೆ ಮಾಡಿದರು.
ಮಾತನಾಡಿದ ಅವರು ಕಟ್ಟಡವನ್ನು ಅಚ್ಚುಕಟ್ಟಾಗಿ ಗುಣಮಟ್ಟದಿಂದ ಕಟ್ಟುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಗುಣಮಟ್ಟದ ಕುರಿತಾಗಿ ಈ ಹಿಂದೆ ವಕೀಲರಿಂದ ಆಕ್ಷೇಪಣೆಗಳು ಬಂದಿದ್ದವು ಈ ಕುರಿತಾಗಿ ಹಠಾತ್ ಭೇಟಿ ನೀಡಿದ ಅವರು ಕಾಮಗಾರಿ ಕುರಿತು ಕೂಲಂಕುಶವಾಗಿ ಪರಿಶೀಲನೆ ನಡೆಸಿದರು .
ಈ ಸಂದರ್ಭದಲ್ಲಿ ನ್ಯಾಯವಾದಿಗಳಾದ ರಾಜು ಶಿರಗಾವೆ, ಎಲ್ ಕೆ ಕೋತ, ಉಪಾಧ್ಯಕ್ಷರಾದ ಶ್ರೀನಾಥ ಪೂಜಾರಿ, ಮಹಿಳಾ ನ್ಯಾಯವಾದಿಗಳಾದ ಸವಿತಾ ಸಂಗೋಟಿ, ಸೇರಿದಂತೆ ವಕೀಲರ ಸಂಘದ ಹಿರಿಯ ಕಿರಿಯ ವಕೀಲರು ಹಾಜರು ಇದ್ದರು.