ಅಥಣಿ: ಕರ್ನಾಟಕ ರಾಜ್ಯದ ಗಣ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅದ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಥಣಿ ಪಟ್ಟಣದ ಹ್ರುದಯ ಭಾಗದಲ್ಲಿರುವ ಪುರಸಭೆ ವ್ಯಾಪ್ತಿಯ ಜೋಡು ಕೆರೆಯನ್ನ ಹೖ ಟೆಕ್ ಮಾದರಿಯಲ್ಲಿ ಅಭಿವ್ರದ್ಧಿ ಪಡಿಸಿ ಕೆರೆಯ ಸೌಂದರ್ಯ ಹೆಚ್ಚಿಸಿ ಆಕರ್ಷಕ ಪ್ರವಾಸಿ ತಾಣವಾಗಿ ಪರಿವರ್ತಿಸಲು ಹದಿನೈದು ಕೋಟಿ ರೂಪಾಯಿ ವೆಚ್ಚದ ಕೆರೆ ಅಭಿವ್ರದ್ದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಯೋಜನೆಗೆ ಆಡಳಿತಾತ್ಮಕವಾಗಿ ಅನೂಮೋದನೆ ನೀಡಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ಹಾಲಿ ಅಥಣಿ ಶಾಸಕರಾದ ಲಕ್ಷ್ಮಣ ಸವದಿ ಅವರ ಪ್ರಯತ್ನದ ಫಲವಾಗಿ ಅಥಣಿ ಜೋಡು ಕೆರೆ ಅಭಿವ್ರದ್ದಿಗೆ ಮುತುವರ್ಜಿ ವಹಿಸಿದ ಶಾಸಕ ಲಕ್ಷ್ಮಣ ಸವದಿ ಅವರ ಕಾರ್ಯಕ್ಕೆ ಅಥಣಿ ಮತ ಕ್ಷೇತ್ರದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ ಪ್ರಶಾಂತ ಹಿರೇಮನಿ