ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಪಂತ ಬಾಳೇಕುಂದ್ರಿ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ ಬೃಹತ್ ಮೂರ್ತಿಯ ಪ್ರತಿಷ್ಟಾಪನೆಯ ಹಿನ್ನೆಲೆಯಲ್ಲಿ ಇಂದು ಗ್ರಾಮ ಪಂಚಾಯತ್ ಕಾರ್ಯಾಲಯದ ಮಾರ್ಗದಲ್ಲಿ ಮೂರ್ತಿಯ ಪ್ರತಿಷ್ಟಾಪನೆಯ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.
ಈ ಭಾಗದ ಶಾಸಕಿ, ಸಚಿವೆ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ್ ಅವರ ವಿಶೇಷ ಕಾಳಜಿ ಹಾಗೂ ಮಾರ್ಗದರ್ಶನದಂತೆ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುತ್ತಿದ್ದು, ಕ್ಷೇತ್ರದಲ್ಲಿ ಈಗಾಗಲೇ ಅನೇಕ ಮಹನೀಯರ ಮೂರ್ತಿಗಳು ತಲೆ ಎತ್ತಿವೆ ಜೊತೆಗೆ ಗುಡಿ ಗೋಪುರಗಳು ಅಭಿವೃದ್ಧಿ ಹೊಂದಿವೆ. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕಳಕಳಿಯನ್ನಿಟ್ಟುಕೊಂಡು ಕ್ಷೇತ್ರವನ್ನು ಮುನ್ನೆಡೆಸುವುದರಲ್ಲಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ್ ರವರು ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮೃನಾಲ್ ಹೆಬ್ಬಾಳಕರ, ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷರಾದ ಶಂಕರಗೌಡ ಪಾಟೀಲ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗುಲಾಬಿ ಕೋಲಕಾರ್, ಸದಸ್ಯರಾದ ಪಾರ್ವತಿ ತಳವಾರ, ಪ್ರೇಮ ಕೋಲಕಾರ, ಭಾಗ್ಯಶ್ರೀ ಹಣಬರ, ಮಲಿಕ್ ಮನಿಯಾರ್, ಇಸ್ಮಾಯಿಲ್ ಮಕಾನದಾರ್, ಬುಡಾ ಸದಸ್ಯರಾದ ನಿಲೇಶ್ ಚಂದಗಡ್ಕರ್, ಮಲ್ಲೇಶ ಚೌಗುಲೆ, ಮಹಾದೇವ ತಳವಾರ, ಗುಂಡು ತಳವಾರ, ಅಪ್ಸರ್ ಜಮಾದಾರ, ಸುರೇಶ ಕಾಳೋಜಿ, ಹೊನಗೌಡ ಪಾಟೀಲ, ಪ್ರವೀಣ ಪಾಟೀಲ, ಸುರೇಶ ಕಟಬುಗೋಳ, ನೂರ್ ಮುಲ್ಲಾ, ಜಮೀಲ್ ಕಾಜಿ, ಶರೀಫ್ ಸನದಿ, ಮಹೇಶ ಸುಗ್ನೆಣ್ಣವರ್, ಉದಯ ಪಾಟೀಲ, ಶಶಾಂಕ ಪಾಟೀಲ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೃಷ್ಣ ಪಾಟೀಲ, ಬಸವರಾಜ ಮ್ಯಾಗೋಟಿ, ಮಹಾಂತೇಶ ನಾಯಕ್, ಸಂತೋಷ ಕೋಲಕಾರ, ಪ್ರಮೋದ ಮೂಡಲಗಿ, ಮಲ್ಲಿಕಾರ್ಜುನ ಹೆಗನಾಯಕ, ಮಾರುತಿ ಕಾಂಬಳೆ, ಸಂಜು ಕೋಲಕಾರ ಮುಂತಾದವರು ಉಪಸ್ಥಿತರಿದ್ದರು.