ರಾಯಬಾಗ: ಅಂಕಲಿ ಪಟ್ಟಣದ ಕೆ.ಎಲ್.ಇ ಸಂಸ್ಥೆಯ, ಶ್ರೀಮತಿ, ಶಾರದಾ ಕೋರೆ ಪ್ರೌಢಶಾಲೆಯ ಮೈದಾನದಲ್ಲಿ ಸೋಮವಾರದಂದು ಪ್ರಭಾಕರಣ್ಣಾ ಕೋರೆಯವರ 77ನೇ ಹುಟ್ಟುಹಬ್ಬದ ಅಂಗವಾಗಿ ಅಂಕಲಿಯ ಪೂರ್ವ ಪ್ರಾಥಮಿಕ ಶಾಲೆ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಪದವಿ-ಪೂರ್ವ ಕಾಲೇಜು ಮತ್ತು ಪದವಿ ಕಾಲೇಜುಗಳ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿತ್ತು.
ವಾಲಿ ಬಾಲ ಆಡುವುದರ ಮುಖಾಂತರ ಉದ್ಘಾಟಿಸಿ ಮಾತನಾಡಿದ ಸಿ. ಬಿ. ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಶ್ರೀ. ಮಲ್ಲಿಕಾರ್ಜುನ ಗ. ಕೋರೆಯವರು ವಿದ್ಯಾರ್ಥಿಗಳ ಜೀವನದಲ್ಲಿ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ಕೊಟ್ಟು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕರಾದ ಶ್ರೀ. ಬಿ. ಆರ್. ಪಾಟೀಲ, ಡಾ॥ ಪ್ರಭಾಕರಣ್ಣಾ ಕೋರೆ ಹುಟ್ಟು ಹಬ್ಬ ಆಚರಣಾ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ. ಭರತೇಶ ಬನವಣೆ, ಶ್ರೀ. ಡಿ. ಎಸ್. ಕರೋಶಿ, ಶ್ರೀ. ಎಸ್. ಎಲ್. ಹಕಾರೆ. ಶ್ರೀ. ಬಿ. ಎಸ್. ಅಂಬಿ, ಶ್ರೀ. ಪಿ. ಎನ್. ತಳವಾರ, ಶ್ರೀಮತಿ ಜೆ. ಎಸ್. ತಮಗೊಂಡ, ಶ್ರೀ. ಎಸ್. ಜಿ. ಹಿರೇಮಠ, ಶ್ರೀ ಪಾರ್ಥ ಸಾರಥಿ ನಂದಾ, ಶ್ರೀ. ಎಮ್. ಎಸ್. ಕಾನಡೆ, ಶ್ರೀಮತಿ ಮಹುವಾ ನಿಯೋಗಿ, ಶ್ರೀ. ಕುಮಾರ ಹಳಿಂಗಳಿ, ದೈಹಿಕ ಶಿಕ್ಷಕರಾದ ಶ್ರೀ. ಎ. ಎಸ್. ಶಿರಗಾಂವೆ, ಶ್ರೀ. ಎಸ್. ಜೆ. ಬಾಬರ, ಶ್ರೀ. ಸಂತೋಷ ಮಾನೆ. ಶ್ರೀ. ಎಸ್. ಜಿ. ಕಾಂಬಳೆ, ಶ್ರೀ. ಎ ಎಸ್. ಮಗದುಮ್ ಹಾಗೂ ಶಿಕ್ಷಕ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದು, ಕ್ರೀಡಾಕೂಟ ಯಶಸ್ವಿಯಾಗಿ ಜರುಗಿದವು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.