ಬೆಳಗಾವಿ : ಮಾನಸಿಕವಾಗಿ ನೊಂದ ಯುವತಿಯೋರ್ವಳು ಹಳ್ಳಕ್ಕೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ನೇಗಿನಹಾಳ ಗ್ರಾಮದ ರುಕ್ಸನಾ ಅಲ್ಲಾ ಭಕ್ಷ ನದಾಫ (20) ಮೃತ ಯುವತಿ ಎಂದು ಗುರುತಿಸಲಾಗಿದೆ. ಬೈಲಹೊಂಗಲ ಎಂ ಕೆ ಹುಬ್ಬಳ್ಳಿ ಮುಖ್ಯರಸ್ತೆಯ ನೇಗಿನಹಾಳ ಗ್ರಾಮದ ಸೇತುವೆ ಹತ್ತಿ ರದ ಹಳ್ಳದಲ್ಲಿ ಬಿದ್ದ ಯುವತಿ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಿ ದ್ದಾಳೆ.
ಸ್ಥಳ ಕ್ಕೆ ಆಗಮಿಸಿದ ಸಿಪಿಐ ಪ್ರಮೋದ ಯಲಿಗಾರ, ಪಿ ಎಸ್ ಐ ಗುರುರಾಜ ಕಲಬುರ್ಗಿ, ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಅವರ ಸಹಾಯ ದಿಂದ ನೀರಿನಿಂದ ಯುವತಿಯ ಶವ ಹೊರ ತೆಗೆದರು. ಇಡೀ ಗ್ರಾಮವೇ ಸೇತುವೆ ಹತ್ತಿರ ನೆರೆದಿತ್ತು. ಕುಟುಂಬಸ್ಥ ರ ಆಕ್ರಂದನ ಮುಗಿಲು ಮುಟ್ಟಿತ್ತು. ಜಿ ಪಂ ಮಾಜಿ ಸದಸ್ಯೆ ರೋಹಿಣಿ ಬಾಬಾ ಸಾಹೇಬ ಪಾಟೀಲ ಸ್ಥಳ ದಲ್ಲಿದ್ದು ಕುಟುಂಬಸ್ಥರ ನ್ನೂ ಸಂತೈಸಿದರು.
ಬೈಲಹೊಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.