Wednesday, June 18, 2025
Google search engine
Homeಕ್ರೈಂನ್ಯಾಯವಾದಿ ಮೇಲೆ ಹಲ್ಲೆ
spot_img

ನ್ಯಾಯವಾದಿ ಮೇಲೆ ಹಲ್ಲೆ

ಗೋಕಾಕ: ರಸ್ತೆ ಅತಿಕ್ರಮಣ ವಿಚಾರವಾಗಿ ಜಗಳ ವಿಕೋಪಕ್ಕೆ ತಿರುಗಿದ್ದು, ವಕೀಲನ ಮೇಲೆ ಹಲ್ಲೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದೆ.

 ವಕೀಲ ಹಾಗೂ ಕಾಂಗ್ರೆಸ್ ಮುಖಂಡ ಚಂದನ್ ಗಿಡ್ಡನವರ್ ಮೇಲೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಚಂದನ್ ಗಿಡ್ಡಣ್ಣವರ್ ಗೋಕಾಕ್ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಟ್ಟಿಗೆ ಯಿಂದ 10-15 ಜನ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೂ ಪ್ರಕರಣ ಸಂಬಂಧ ಚಂದನ್ ಗಿಡ್ಡಣ್ಣವರ್ ವಿರುದ್ಧ ಶೆಟ್ಟಪ್ಪ ಮೆಸ್ತ್ರಿ ದೂರು ದಾಖಲು ಮಾಡಿದ್ದಾರೆ.

 ಹಲ್ಲೆ ಸಂಬಂಧ ಗಿಡ್ಡಣ್ಣವರ್ ಸಹ ರಮೇಶ ಜಾರಕಿಹೊಳಿ ಬೆಂಬಲಿಗರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಗೋಕಾಕ್ ಶಹರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.

RELATED ARTICLES
- Advertisment -spot_img

Most Popular

error: Content is protected !!