ಬೆಳಗಾವಿ : ದುಡಿಮೆಯ ಜೊತೆಗೆ ಕೂಲಿಕಾರರು ತಮ್ಮ ಆರೋಗ್ಯಕ್ಕೆ ಮಹತ್ವ ನೀಡಬೇಕು ಎಂದು ಕಾರ್ಯನಿರ್ವಾಹಕ ಅಧಿಕಾರಿ ಯಶಂತಕುಮಾರ ಹೇಳಿದರು
ತಾಲ್ಲೂಕಿನ ಕಲಖಾಂಬ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಹುಲ್ಯಾನೂರ ಗ್ರಾಮದ ಹೊಸಕೆರೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಪಂಚಾಯತ, ತಾಲ್ಲೂಕ ಪಂಚಾಯತ, ಗ್ರಾಮ ಪಂಚಾಯತ ಹಾಗೂ ಆರೋಗ್ಯ ಇಲಾಖೆಯ ವತಿಯಿಂದ ಜೂನ್ 11 ರಂದು ಬುಧವಾರ ಆಯೋಜಿಸಿದ್ದ ಆರೋಗ್ಯ ಶಿಭಿರ ಉದ್ದೇಶಿಸಿ ಅವರು ಮಾತನಾಡಿ, ಕಾರ್ಮಿಕರಿಗೆ ಕುಟುಂಬದ ಜವಾಬ್ದಾರಿ ಹೆಚ್ಚುಇರುತ್ತದೆ. ದುಡಿಮೆಯ ಸ್ವಲ್ಪ ಹಣದಲ್ಲಿ ಆರೋಗ್ಯಕ್ಕೆ ಖರ್ಚುಮಾಡುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಯಕ್ಕೆ ಸರಿಯಾಗಿ ಊಟೋಪಚಾರ ಮಾಡಿಕೊಂಡು ಉತ್ತಮ ಆರೋಗ್ಯವಂತರಾಗಿ ಬಾಳಬೇಕು. ನೀರನ್ನು ಕಾಯಿಸಿ,ಆರಿಸಿ ಕುಡಿಯಬೇಕು.ಇದರಿಂದ ಜ್ವರ,ಕೆಮ್ಮು ಹಾಗೂ ಶೀತಗಳಂತಹ ರೋಗಗಳು ಬರುವದಿಲ್ಲ ಜೊತೆ ಹಣ್ಣು ತರಕಾರಿಗಳನ್ನು ಹೆಚ್ಚು ಬಳಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಗೋಪಾಲ ಗೂಡಸಿ, ತಾಂತ್ರಿಕ ಸಂಯೋಜಕ ಮುರುಗೇಶ ಯಕ್ಕಂ̧ಚ್ಚಿ, ಐಇಸಿ ಸಂಯೋಜಕ ರಮೇಶ ಮಾದರ,ಕಾಯಕ ಮಿತ್ರರು, ಬಿ.ಎಫ್.ಟಿ, ಗ್ರಾಮ ಪಂಚಾಯತಿ ಮತ್ತು ವೈಧ್ಯಕೀಯ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.