ಬೆಳಗಾವಿ : ಶಿಂಧೋಳ್ಳಿ ಗ್ರಾಮದ ಹಿರಿಯರ ಪರಿಶ್ರಮ ಭಕ್ತರ ಉತ್ಸಾಹದಿಂದ ಗ್ರಾಮದೇವಿ ಶ್ರೀ ಮಹಾಲಕ್ಷ್ಮೀ ದೇವಿಯ ಜಾತ್ರಾ ಉತ್ಸವ,ಅತ್ಯಂತ ಯಶಸ್ವಿಯಾಗಿ ಅರ್ಥಪೂರ್ಣವಾಗಿ ಭಕ್ತಿಪೂರ್ವಕವಾಗಿ ನೆರವೇರಿತು.
ಹತ್ತು ದಿನಗಳ ನಡೆದ ಜಾತ್ರಾ ಉತ್ಸವ ರಥೋತ್ಸವವದಿಂದ ಆರಂಭವಾಗಿ ಗ್ರಾಮದಲ್ಲಿ ಭಕ್ತಿಯ ಗಂಗೆಯನ್ನು ಹರಿಸಿತು.ಹತ್ತು ದಿನಗಳಲ್ಲಿ ಲಕ್ಷಾಂತರ ಭಕ್ತರು,ಗಣ್ಯರು ದೇವಿಯ ದರ್ಶನ ಪಡೆದು ಪುಣೀತರಾದರು ಜಾತ್ರಾ ಉತ್ಸವ ಸಮೀತಿಯು ಗ್ರಾಮದಲ್ಲಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮಾಡಿದ್ದರಿಂದ ಭಕ್ತರು ಅತ್ಯಂತ ಸರಳವಾಗಿ ದೇವಿಯ ದರ್ಶನ ಪಡೆಯಲು ಸಾಧ್ಯವಾಯಿತು.
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕುಟುಂಬ ಸಮೇತ ದೇವಿಯ ದರ್ಶನ ಪಡೆದರು.ಚಿಕ್ಕೋಡಿ ಸಂಸದೆ ಪ್ರೀಯಾಂಕಾ ಜಾರಕಿಹೊಳಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ,ಮಾಜಿ ಶಾಸಕರುಗಳಾದ ಸಂಜಯ ಪಾಟೀಲ, ಮಹಾಂತೇಶ್ ಕವಟಗಿಮಠ,ಬೆಳಗಾವಿ ಮೇಯರ್ ಮಂಗೇಶ್ ಪವಾರ್ ಉಪ ಮೇಯರ್ ವಾಣಿ ವಿಲಾಸ್ ಜೋಶಿ ಸೇರಿದಂತೆ ಹಲವಾರು ಜನನಾಯಕರು ,ಗಣ್ಯರು ಶಿಂಧೋಳ್ಳಿ ಗ್ರಾಮದೇವಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದು ವಿಶೇಷ.
ಶಿಂಧೋಳ್ಳಿ ಗ್ರಾಮದೇವಿಯ ಮಂದಿರದ ಉದ್ಘಾಟನೆಯಿಂದ ಶುಭಾರಂಭಗೊಂಡ ಜಾತ್ರೆಯಲ್ಲಿ ರಥೋತ್ಸವ ದೇವಿಯ ಹೊನ್ನಾಟ,ಜಾತ್ರೆಯ ನಿಮಿತ್ಯ ಆಯೋಜಿಸಿದ್ದ ಜಂಗೀ ಕುಸ್ತಿ,ಮಹಿಳಾ ಕುಸ್ತಿ,ರಸಮಂಜರಿ ಕಾರ್ಯಕ್ರಮ, ನಾಟಕ ಸೇರಿದಂತೆ ವಿವಿಧ ಮನರಂಜನೆಯ ಕಾರ್ಯಕ್ರಮಗಳು ಶಿಂಧೋಳ್ಳಿ ಗ್ರಾಮದೇವಿ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದವು.