ಬೆಳಗಾವಿ: ರಾಜ್ಯ ಸಾರಿಗೆ ಇಲಾಖೆಯಲ್ಲಿ ಸಿಬ್ಬಂಧಿಗೆ ಕಿರಕುಳ, ರಜೆಯ ಸಮಸ್ಯೆ ಬಗ್ಗೆ ಅನೇಕ ದೂರುಗಳು ಇವೆ. ಈ ನಡುವೆ ಬೆಳಗಾವಿಯಲ್ಲಿ ಚಾಲಕ ಒಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆರೋಗ್ಯ ಸಮಸ್ಯೆ ಇದರು ರಜೆ ಕೊಡಲಿಲ್ಲ ಎಂದು ಮನನೊಂದಿದ್ದರು ಎನ್ನಲಾಗಿದೆ. ಬೆಳಗ್ಗೆ ಎಂದನಂತೆ ಕೆಲಸಕ್ಕೆ ಬಂದು, ಬಸ್ ನಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾರೆ.
ಬೆಳಗಾವಿಯ ನಗರ ಸಾರಿಗೆ ಬಸ್ ನಲ್ಲಿಯೇ ಚಾಲಕನ ಆತ್ಮಹತ್ಯೆ. ಪತಿಯ ಸಾವಿನ ಸುದ್ದಿಕೇಳಿ ಮುರ್ಛೆ ಹೋದ ಮಹಿಳೆ. ಬಾಲಚಂದ್ರ ತುಕೋಜಿ 45 ವರ್ಷದ ಇವರು ಸಾರಿಗೆ ಇಲಾಖೆಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಕಳೆದ 20 ವರ್ಷಗಳಿಂದ ಇಲಾಖೆಯಲ್ಲಿಯೇ ಸೇವೆ ಸಲ್ಲಿಸಿದ್ದಾರೆ. ಆದರೇ ಇತ್ತೀಚಿಗೆ ಬೆನ್ನು ನೋವಿನಿಂದ ಬಳಲಿದ್ರು, ಈ ವೇಳೆಯಲ್ಲಿ ಸರಿಯಾಗಿ ವಿಶ್ರಾಂತಿ ಪಡೆಯಲು ರಜೆ ನೀಡಿರಲಿಲ್ಲ ಎನ್ನುವ ಆರೋಪ ಇದೆ. ಇವತ್ತು ಬೆಳಗ್ಗೆ 6.30ಕ್ಕೆ ಡಿಪೋ ನಂಬರ್ 2ಕ್ಕೆ ಬಂದ ಬಾಲಚಂದ್ರ ಬಸ್ ನಲ್ಲಿಯೇ ನೇಣು ಬೀಗಿದಿಕೊಂಡು ಆತ್ಮಹತ್ಯೆ ಮಾಡಿದ್ದಾರೆ.
7 ಗಂಟೆಗೆ ಬಸ್ ಹೊರಡುವ ಸಂದರ್ಭದಲ್ಲಿ ಸಿಬ್ಬಂದಿಯೊಬ್ಬರು ಬಂದು ನೋಡಿದ್ದು, ಅಲ್ಲಿ ಮೃತ ದೇಹ ಪತ್ತೆಯಾಗಿದೆ. ಇದರಿಂದ ಗಾಬರಿಯಾದ ಡಿಪೋ ಸಿಬ್ಬಂಧಿ ಮಾರ್ಕೆಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಮಾರ್ಕೆಟ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು .
ಇನ್ನೂ ಈ ಸಾವಿನ ಬಗ್ಗೆ ಮಾತನಾಡಿದ ಬಾಲಚಂದ್ರ ಸಂಬಂಧಿ ಪ್ರಶಾಂತ್, ಬಾಲಚಂದ್ರ ಅಕ್ಕನ ಮಗಳ ಮದುವೆ ಸಂಬಂಧ ಇದೇ ಎಪ್ರಿಲ್ 6 ವರೆಗೆ ರಜೆ ಹಾಕಿದ್ರು. ಆದರು ಅಧಿಕಾರಿಗಳು ಕೆಲಸಕ್ಕೆ ಬಾ ಎಂದು ಒತ್ತಾಯ ಮಾಡಿದ್ದಾರೆ. ಅಧಿಕಾರಿಗಳು ರಜೆ ಕೊಡಲ್ಲ ಎನ್ನುತ್ತಾರೆ. ಕೆಲಸ ಮುಗಿಸಿ ಮುಗಿಸಿಕೊಂಡು ಬಂದು ಊರಿಗೆ ಹೋಗೊಣ ಎಂದು ಹೇಳಿದರು.ನಾಳೆ ಬಾಲಚಂದ್ರ ಅಕ್ಕನ ಮಗಳ ಮದುವೆ ಇತ್ತು, ಇಂದು ಹಳದಿ ಕಾರ್ಯಕ್ಕೆ ಹೋಗೊಣ ಎಂದು ಹೇಳಿ. ಮದುವೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿ. ಮುಂಜಾನೆ ಡ್ಯುಟಿಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುತ್ತಾರೆ.
ಚಾಲಕ ಆತ್ಮಹತ್ಯೆ ಸಂಬಂಧ ಕುಟುಂಬಸ್ಥರು ನೀಡುವ ದೂರಿನ ಅನ್ವಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಅಕ್ಕನ ಮಗಳ ಮದುವೆ ತಯಾರಿ ನಡೆಸಿದ್ದ ಕುಟುಂಬಸ್ಥರಲ್ಲಿ ಸದ್ಯ ಸೂತಕದ ಛಾಯೆ ಆವರಿಸಿದೆ. ಬೆನ್ನು ನೋವು ಎಂದು ಬಳಲಿದ್ರು, ಹಿರಿಯ ಅಧಿಕಾರಿಗಳು ಯಾಕೆ ರಜೆ ಕೊಡಲಿಲ್ಲ ಎನ್ನುವ ಬಗ್ಗೆ ಸಂಶಯಗಳು ವ್ಯಕ್ತವಾಗಿವೆ. ಇನ್ನೂ ಸಾರಿಗೆ ಇಲಾಖೆಯಲ್ಲಿ ಸಿಬ್ಬಂಧಿಗೆ ಕಿರಕುಳದ ಬಗ್ಗೆ ಅನೇಕ ದೂರುಗಳು ಇದ್ರು. ಯಾಕೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎನ್ನು ಬಗ್ಗೆ ಸಿಬ್ಬಂಧಿಗಳಲ್ಲಿ ಗೊಂದಲ ಮೂಡಿದೆ