Thursday, June 19, 2025
Google search engine
Homeಧಾರ್ಮಿಕಶ್ರೀ ಸದ್ಗುರು ನಿರುಪಾಧೀಶ್ವರ ರ 33ನೇ ವರ್ಷದ ಜಾತ್ರಾ ಮಹೋತ್ಸವ
spot_img

ಶ್ರೀ ಸದ್ಗುರು ನಿರುಪಾಧೀಶ್ವರ ರ 33ನೇ ವರ್ಷದ ಜಾತ್ರಾ ಮಹೋತ್ಸವ

ಬೆಳಗಾವಿ :-  ಗೋಕಾಕ ತಾಲೂಕಿನ ಕೈತನಾಳ ಗ್ರಾಮದ  ಪುಣ್ಯ ಕ್ಷೇತ್ರ ದ ಶ್ರೀಸದ್ಗುರು ನಿರುಪಾಧೀಶ್ವರ ಜಾತ್ರಾ ಮಹೋತ್ಸವ ಜರುಗಲಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಕೂಡ 20-03-2025 ರಂದು  ಶ್ರೀ ಸದ್ಗುರು ನಿರುಪಾಧೀಶ್ವರ ಕರ್ತೃ ಗದ್ದುಗೆಗೆ ಅಭಿಷೇಕ  ಅಯ್ಯಾಚಾರ ಶಿವ ಭಜನೆ ಸಪ್ತಾಹ ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಲಿವೆ.

ಎರಡನೇ ದಿವಸ 21-03-2025 ರಂದು ಶ್ರೀ ಸದ್ಗುರು ನಿರುಪಾಧೀಶ್ವರ ಮಾನವ ಧರ್ಮ ವೇದಿಕೆಯಲ್ಲಿ ನಾಡಿನ ಹರ ಗುರು ಚರಮೂರ್ತಿಗಳ  ಆಶೀರ್ವಚನ ಹಾಗೂ ಸಾಮೂಹಿಕ ವಿವಾಹ ಮತ್ತು ಪರಮಪೂಜ್ಯ ಶ್ರೀವೀರಭದ್ರ ಮಹಾಸ್ವಾಮಿಜೀ ಗಳವರಿಗೆ ಭಕ್ತರಿಂದ ತುಲಾಭಾರ ಸೇವೆ, ಸೇರಿದಂತೆ ವೇದಿಕೆಯ ಮೇಲೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಅದೇ ದಿನ ಸಾಯಂಕಾಲ ಶ್ರೀ ಸದ್ಗುರು ನಿರುಪಾಧೀಶ್ವರರ ರಥೋತ್ಸವು ಸಕಲ ವಾದ್ಯ ವೈಭವಗಳೊಂದಿಗೆ ಹರ ಗುರು ಚರ ಮೂರ್ತಿಗಳ ಸಮ್ಮುಖದಲ್ಲಿ ಜರುಗಲಿದ್ದು, ಸರ್ವ ಸದ್ಭಕ್ತರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಸದ್ಗರುವಿನ ಆಶೀರ್ವಾದ ಮತ್ತು ಪ್ರಸಾದವನ್ನು ಸ್ವೀಕರಿಸಿ ಸದ್ಗುರು ವಿನ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.

RELATED ARTICLES
- Advertisment -spot_img

Most Popular

error: Content is protected !!