ಅಥಣಿ: ಅಥಣಿ ಪಟ್ಟಣದಲ್ಲಿ ಜನವರಿ 26 ರಂದು ರೋಟರಿ ಸಂಸ್ಥೆ ಅಥಣಿ ಇವರ ಆಶ್ರಯದಲ್ಲಿ ಮಧ್ಯಾಹ್ನ ಎರಡು ಗಂಟೆಗೆ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ಜಿಎಮ್ ಗಾಳಿಪಟ ಉತ್ಸವ ಹಮ್ಮಿಕೊಳ್ಳಲಾಗಿದೆ ಇದೊಂದು ಹೊಸ ಪ್ರಯತ್ನವಾಗಿದ್ದು ಗ್ರಾಮೀಣ ಕ್ರೀಡೆಗಳು ಮರೆಯಾಗುತ್ತಿರುವ ದಿನಗಳಲ್ಲಿ ಗ್ರಾಮೀಣ ಕ್ರೀಡೆಗಳಿಂದ ಈಗಿನ ಯುವಕರು ದೂರವಾಗುತ್ತಿದ್ದು ಗಾಳಿ ಪಟ ಉತ್ಸವದ ಮೂಲಕ ಇಂದಿನ ಮಕ್ಕಳ ಮನಸ್ಸಿಗೆ ಮುದನೀಡುವ ಪ್ರಯತ್ನವನ್ನು ರೋಟರಿ ಸಂಸ್ಥೆ ಮಾಡುತ್ತಿದೆ ಅಲ್ಲದೆ ಕರ್ನಾಟಕದ ಹೆಸರಾಂತ ಕೈಟ್ ಪ್ಲಯರ್ ಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ.
ಗಾಳಿಪಟ ಉತ್ಸವಕ್ಕೆ ಬರುವ ಸ್ಪರ್ಧಿಗಳಿಗೆ ಪ್ರವೇಶ ಉಚಿತವಾಗಿದ್ದು ಭಾಗವಹಿಸುವವರಿಗೆಲ್ಲ ಸರ್ಟಿಫಿಕೇಟ್ ನೀಡಲಾಗುವದು ಭಾಗವಹಿಸಿದ ಎಲ್ಲರಿಗೂ ಉಚಿತವಾಗಿ ಗಾಳಿಪಟ ನೀಡಲಾಗುವದು ಅಲ್ಲದೆ ಸ್ಪರ್ಧಾಳುಗಳು ತರುವ ಗಾಳಿಪಟಗಳಿಗೂ ಅವಕಾಶ ನೀಡಲಾಗುವದು ಭಾಗವಹಿಸುವ ಸ್ಪರ್ಧಿಗಳಿಗೆ ವಯಸ್ಸಿನ ನಿರ್ಭಂಧವಿಲ್ಲ ಮತ್ತು ಮಾಂಜಾ ದಾರ ಬಳಕೆಗೆ ಅವಕಾಶ ಇರುವದಿಲ್ಲ ಉಚಿತವಾಗಿ ಪ್ರವೇಶ ಇರುವದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು ರೋಟರಿ ಸಂಸ್ಥಾಪಕ ಅಧ್ಯಕ್ಷರಾದ ಗಜಾನನ ಮಂಗಸೂಳಿ ತಿಳಿಸಿದರು.
ಒಂದು ಸಾವಿರದ ನಲವತ್ತ ಮೂರು ಸ್ಪರ್ಧಿಗಳು ಈಗಾಗಲೇ ಹೆಸರು ನೊಂದಾಯಿಸಿದ್ದು ಜನೆವರಿ ಇಪ್ಪತ್ತಾರರಂದು ಮಧ್ಯಾಹ್ನ ಎರಡು ಗಂಟೆಗೆ ನಡೆಯಲಿರುವ ಗಾಳಿಪಟ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಕೂಡ ಭಾಗವಹಿಸಿ ಕಾರ್ಯಕ್ರಮದ ಮೆರಗು ಹೆಚ್ಚಿಸಬೇಕು ಎಂದು ಗಜಾನನ ಮಂಗಸೂಳಿ ಕರೆ ನೀಡಿದರು.
ಅರುಣ ಯಲಗುದ್ರಿ ಸ್ವಾಗತಿಸಿದರು,ಮತ್ತು ಅರುಣ ಸೌದಾಗರ ಅವರು ವಂದಿಸಿದರು
ಈ ವೇಳೆ ರೋಟರಿ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ,ಅಧ್ಯಕ್ಷರಾದ ಅರುಣ ಸೌದಾಗರ,ಮಾಜಿ ಅಧ್ಯಕ್ಷ ಡಾಕ್ಟರ್ ಪಿ ಪಿ ಮಿರಜ್,ಹಾಗೂ ಪ್ರಪುಲ್ ಪಡನಾಡ, ಮತ್ತು ಭರತ ಸೋಮಯ್ಯ,ರಾಜು ಗಾಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.