Thursday, June 19, 2025
Google search engine
Homeರಾಜಕೀಯ24x7 ಸದಾ ಜನರ ಸೇವೆಗೆ ಲಭ್ಯವಾಗಿದ್ದೇನೆ: ಜಗದೀಶ್ ಶೆಟ್ಟರ್ 
spot_img

24×7 ಸದಾ ಜನರ ಸೇವೆಗೆ ಲಭ್ಯವಾಗಿದ್ದೇನೆ: ಜಗದೀಶ್ ಶೆಟ್ಟರ್ 

ಗ್ರಾಮೀಣ ವಿಧಾನ ಸಭಾ ಬೂತ ಮಟ್ಟದ ಬುಜೆಪಿ ಕಾರ್ಯಕರ್ತರ ಸಭೆ:

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲದಲ್ಲಿ ಬಾಕ್ಸೈಟ್ ರಸ್ತೆ ಹಿಂಡಲಗಾ ಮೈದಾನದಲ್ಲಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯನ್ನು ಸಂಭ್ರಮದಿಂದ ಮುಕ್ತಾಯಗೊಳಿಸಲಾಯಿತು ಎಂದು ಲೋಕಸಭಾ ಬಿಜೆಪಿಯ ಅಧಿಕೃತ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಹೇಳಿದರು .

ನಾನು ಆಯ್ಕೆಯಾದ ನಂತರ 5 ವರ್ಷಗಳ ಕಾಲ ಬೆಳಗಾವಿಯಲ್ಲಿ ಇರುತ್ತೇನೆ ಮತ್ತು ಶ್ರೀ ನರೇಂದ್ರ ಮೋದಿಜಿ ಹಾಗೂ ಸುರೇಶ ಅಂಗಡಿ ಅವರ ಕೆಲಸ ಮಾಡುವಂತೆ ನಾನು ಕೂಡ 24×7 ಸದಾ ಜನರ ಸೇವೆಗೆ ಲಭ್ಯವಾಗಿದ್ದೇನೆ ಎಂದು ಹೇಳುತ್ತೇನೆ.

 

ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲದ ಅಧ್ಯಕ್ಷ ಧನಂಜಯ ಜಾಧವ ಈ ಸಂದರ್ಭದಲ್ಲಿ ಮಾತನಾಡಿ ದೇಶದಲ್ಲಿ ಮೋದಿಜಿ ಸುಮಾರು 150 ಯೋಜನೆಗಳನ್ನು ನಮಗೆ ತಲುಪಿಸಿದ್ದಾರೆ.

ದೇಶದಲ್ಲಿ 500 ವರ್ಷಗಳಿಂದ ಪುರಾತನವಾದ ಮಂದಿರದ ನಿರಂತರ ಹೋರಾಟ ಮಾಡಿ ನಮ್ಮೇಲ್ಲರಿಗೆ ಭವ್ಯವಾದ ರಾಮಮಂದಿರವನ್ನು ಕಟ್ಟಿಕೊಟ್ಟಿದ್ದಾರೆ.

ನಮ್ಮ ದೇಶವನ್ನು ಸುರಕ್ಷಿತ ಮತ್ತು ಅಹಿಂಸಾತ್ಮಕವಾಗಿರಿಸಲು ಈ ಬಾರಿ ಪ್ರತಿಯೊಬ್ಬ ನಾಗರೀಕರು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ ಅವರು ಮಾತನಾಡಿ, ಹೆಬ್ಬಾಳ್ಕರ್ ಅವರು ಸಾರ್ವಜನಿಕರಿಗೆ ಸುಳ್ಳು ಭರವಸೆ ನೀಡುತ್ತಿದ್ದು, ಜನ ಇದಕ್ಕೆ ಬಲಿಯಾಗಬಾರದು ಸತ್ಯಾಸತ್ಯತೆ ಬಗ್ಗೆ ಜನರು ಅವಲೋಕಿಹಿಸಬೇಕೆಂದು ಹೇಳಿದರು.

ಗೋಕಾಕ ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಂಸದೆ ಮಂಗಳಾ ಅಂಗಡಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ವಿಧಾನಪರಿಷತ್ ಶಾಸಕ ಹನುಮಂತ ನಿರಾಣಿ, ರಾಜ್ಯ ಉಪಾಧ್ಯಕ್ಷ ಅನಿಲ ಬೆಂಕೆ, ಜಿಲ್ಲಾ ಉಪಾಧ್ಯಕ್ಷ ಯುವರಾಜ್ ಜಾಧವ, ಮಾಜಿ ಮಂಡಲ ಅಧ್ಯಕ್ಷ ವಿನಯ್ ಕದಂ, ಬಿಜೆಪಿ ಮುಖಂಡರಾದ ನಾಗೇಶ ಮನೋಳ್ಕರ್, ಭಾಗ್ಯಶ್ರೀ ಕೋಕಿತ್ಕರ್, ದಾಡಗೌಡ ಸಹೋದರ. , ಸ್ನೇಹಲ್ ಕೋಲೇಕರ್, ಸೋನಾಲಿ ಸರ್ನೋಬತ್, ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಎಲ್ಲಾ ಬೂತ್ ಮಟ್ಟದ ಕಾರ್ಯಕರ್ತರು, ಸಾವಿರಾರು ಮಹಿಳೆಯರು ಹಾಗೂ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

RELATED ARTICLES
- Advertisment -spot_img

Most Popular

error: Content is protected !!