Friday, June 20, 2025
Google search engine
Homeಸುದ್ದಿಲೋಕಸಭಾ ಚುನಾವಣೆ ನಿಮಿತ್ತ ಕಾಂಗ್ರೇಸ್ ಕಾರ್ಯಕರ್ತರ ಪೂರ್ವಭಾವಿ ಸಭೆ: ಸಶಕ್ತ ಹಾಗೂ ಸದೃಡ...
spot_img

ಲೋಕಸಭಾ ಚುನಾವಣೆ ನಿಮಿತ್ತ ಕಾಂಗ್ರೇಸ್ ಕಾರ್ಯಕರ್ತರ ಪೂರ್ವಭಾವಿ ಸಭೆ: ಸಶಕ್ತ ಹಾಗೂ ಸದೃಡ ಭಾರತ ಕಟ್ಟಲು ಈ ಬಾರಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರಿಗೆ ಕರೆ

 

ಮುದ್ದೇಬಿಹಾಳ: ವಿಜಯಪುರ ಮತಕ್ಷೇತ್ರ ಹಿಂದಿನಿಂದಲೂ ಕಾಂಗ್ರೇಸನ ಭದ್ರ ಕೋಟೆಯಾಗಿದೆ ಆದರೇ ಕೋಮುವಾದದಿಂದ ಜನರ ದಾರಿ ತಪ್ಪಿಸುವ ಮೂಲಕ ಕಳೆದ ಮೂರು ಬಾರಿ ಬಿಜೆಪಿ ಗೆಲ್ಲಲು ಸಾಧ್ಯವಾಗಿದೆ. ಸಧ್ಯ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರವರ ನೇತೃತ್ವದ ಕಾಂಗ್ರೇಸ್ ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸಿ ಉತ್ತಮ ಆಡಳಿತ ನಡೆಸುತ್ತಿರುವುದು ಜನರು ಮೆಚ್ಚಿಕೊಂಡಿದ್ದಾರೆ.

ಈ ಹಿನ್ನೇಲೆಯಲ್ಲಿ ಈ ಬಾರಿ ಕಾಂಗ್ರೇಸ್ ಅಭ್ಯರ್ಥಿ ರಾಜು ಆಲಗೂರ ಅವರ ಗೆಲುವು ಬಹುತೇಕ ನಿಶ್ಚಿತ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಭೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ ಎಸ್ ನಾಡಗೌಡ(ಅಪ್ಪಾಜಿ)ಯವರು ಹೇಳಿದರು.

ಪಟ್ಟಣದ ಹುಡ್ಕೋ ಬಡಾವಣೆ ಹತ್ತಿರವಿರುವ ಟಾಪ್ ಇನ್ ಟೌನ್ ಮಂಗಲಭವನದಲ್ಲಿ ತಾಲೂಕಾ ಬ್ಲಾಕ್ ಕಾಂಗ್ರೇಸ್ ವತಿಯಿಂದ ಲೋಕಸಭಾ ಚುನಾವಣೆಯ ಹಿನ್ನೇಲೆಯಲ್ಲಿ ಕಾಂಗ್ರೇಸ್ ಮುಖಂಡರ, ಕಾರ್ಯಕರ್ತರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮೋದಿಯವರನ್ನು ಬಿಟ್ಟರೇ ಬಿಜೆಪಿಯವಲ್ಲಿ ನಾಯಕರೆ ಇಲ್ಲ ಹಾಗಾಗಿ ಮೋದಿ ನೋಡಿ ಮತ ಹಾಕಿ ಎಂದು ಬಿಜೆಪಿಗರು ಜನರಲ್ಲಿ ಮತಕೇಳುತ್ತಾರೆ. ಆದರೇ ಕಾಂಗ್ರೇಸ್ ನಲ್ಲಿ ಸೋನಿಯಾ ಗಾಂಧಿ, ರಾಹುಲ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಘಟಾನುಘಟಿ ನಾಯಕರಿದ್ದಾರೆ ಅದಕ್ಕೆ ಬಿಜೆಪಿಯವರಿಗೆ ಭಯ ಜಾಸ್ತಿ
ಹಾಗಾಗಿಯೇ ದೇಶದಲ್ಲಿ ಜನರಿಗೆ ಹಿಂದೂ ಮುಸ್ಲಿಂ ಎನ್ನುವ ಕೋಮು ಭಾವನೆ ಸೃಷ್ಠಿಸಿ ಜನರಿಗೆ ದಾರಿ ತಪ್ಪಿಸುವ ಕಾರ್ಯ ಮಾಡುತ್ತಾರೆ.

ಪ್ರದಾನಿ ಮೋದಿಯವರಿಗೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ರಾಮಯ್ಯನವರ ಅರ್ದದಷ್ಟು ರಾಜಕೀಯದ ಮತ್ತು ದೇಶವನ್ನು ಹೇಗೆ ಮುನ್ನಡೆಸಬೇಕು ಎನ್ನುವ ಅನುಭವ ಹೊಂದಿಲ್ಲ ಇದರಿಂದಾಗಿದೇ ಕಳೆದ 10 ವರ್ಷಗಳ ಬಿಜೆಪಿ ಆಡಳಿತದಲ್ಲಿ ದೇಶದಲ್ಲಿ ಅಭಿವೃದ್ಧಿ ಶೂನ್ಯ ಸಾಧನೆಯಾಗಿದೆ.

ನಿರುದ್ಯೋಗ ಸಮಸ್ಯೆ, ನಿರಾವರಿ ಯೋಜನೆಗಳ ಸಮಸ್ಯೆ ಸೇರಿದಂತೆ ರೈತರ, ಮಹಿಳೆಯರ,ಬಡವರ, ಧೀನ ದಲಿತರ ಶ್ರೇಯೋಭಿವೃದ್ಧಿಗಾಗಿ ಯಾವೊಂದುಅನೇಕ ಯೋಜನೆಗಳು ಅನುಷ್ಠಾನಗೊಳಿಸುವಲ್ಲಿ ಕೇಂದ್ರ ಸರಕಾರ ಸಂಪೂರ್ಣ ವಿಫಲವಾಗಿದೆ.

ಕಳೆದ 2019ರ ಲೋಕಸಭಾ ಚುನಾವಣೆ ಗೆಲ್ಲಲು ಪೋಲ್ವಾಮಾ ದಾಳಿಯನ್ನು ತಮ್ಮ ರಾಜಕೀಯ ದಾಳವಾಗಿ ಬಳಸಿಕೊಂಡು ಜನರಿಗೆ ದೇಶಾಭಿಮಾನ ಮೂಡಿಸಿ ಗೆದ್ದು ಬಂದರು, ಸಧ್ಯ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿ ಬಹುದೊಡ್ಡ ಸಾಧನೆ ಮಾಡಿದ್ದೇವೆ ಎನ್ನುವಂತೆ ಬಿಂಬಿಸಿ ದೇಶದ ಜನರನ್ನು ಧಾರ್ಮಿಕವಾಗಿ ನಂಬಿಸಿ ಈ ಬಾರಿಯೂ ಗೆಲ್ಲಬೇಕು ಎಂದು ಕೊಂಡಿದ್ದಾರೆ. ನಾವೇನು ರಾಮಭಕ್ತರವಲ್ಲವೇ.? ನಾವೇನು ಬೇರೆ ದೇಶದಲ್ಲಿದ್ದೇವಾ? ಆದರೇ ಜನರು ಎಲ್ಲವನ್ನೂ ಸೂಕ್ಷ್ಮತೆಯಿಂದ ಕಾಯ್ದು ಕುಳಿತಿದ್ದಾರೆ ಎಲ್ಲ ಸಂದರ್ಭದಲ್ಲೂ ಮೋಸದ ಮಾತುಗಳು ನಡೆಯೋದಿಲ್ಲ. ಎಂಬುದನ್ನು ಕಾಂಗ್ರೇಸ್ ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ ಬರುವಂತೆ ಮಾಡಿದ್ದಾರೆ.

ಅದರಂತೆ ಚುನಾವಣೆ ಪೂರ್ವದಲ್ಲಿ ಕಾಂಗ್ರೇಸ್ ನೀಡಿದ ಐದೂ ಭರವಸೆಯನ್ನು ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರು ಎಲ್ಲ ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸು ಮೂಲಕ ಉತ್ತಮ ಆಡಳಿತ ನಡೆಸುವುದರೊಂದಿಗೆ ನಮ್ಮ ಸರಕಾರ ನಡಿದಂತೆ ನಡೆದಿದೆ. ಈ ಬಾರಿ ಈ ಬ್ರಷ್ಟ ಹಾಗೂ ಸುಳ್ಳು ಆಸ್ವಾಸನೇ ನೀಡಿ ಜನರಿಗೆ ಮೋಸ ಮಾಡುತ್ತಿರುವ ಬಿಜೆಪಿ ಸರಕಾರವನ್ನು ಕಿತ್ತೇಸೆದು ಕಾಂಗ್ರೇಸ್ ನ(ಇಂಡಿಯಾ)ಗೆ ಗೆಲ್ಲಿಸಲು ಜನರು ಕಾತುರದಿಂದ ಕಾಯುತ್ತಿದ್ದಾರೆ.

ಸಧ್ಯ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್(ಇಂಡಿಯಾ) ಒಕ್ಕೂಟ ಅಧಿಕಾರಕ್ಕೆ ಬಂದರೆ ದೇಶದಲ್ಲಿನ ಎಲ್ಲ ರೈತರ ಸಾಲ ಮನ್ನಾ ಮಾಡುವುದರ ಜೊತೆಗೆ ರೈತರ ಬೆಳೆಗಳಿಗೆ ನಿಗದಿತ ಬೆಂಬಲ ಬೆಲೆ ನಿಗದಿಗೊಳಿಸುವುಸಲ್ಲಿ ವಿಶೇಷ ಕಾನೂನು ರೂಪಿಸುವುದು,ಪ್ರತಿ ಕಡುಬಡವ ಮಹಿಳೆಯ ಸ್ವಾವಲಂಭಿ ಬದುಕಿಗೆ ವಾರ್ಷಿಕ 1 ಲಕ್ಷಗಳವರಗೆ ಆರ್ಥಿಕ ಸಹಾಯ ನೀಡುವುದು, ಪ್ರಥಮ ವರ್ಷದಲ್ಲಿಯೇ ನಿರುದ್ಯೋಗ ಸಮಸ್ಯೆ ಬಗೆಹರಿಸಲು 30 ಲಕ್ಷ ಉದ್ಯೋಗ ಭರ್ತಿ ಮಾಡಿಕೊಳ್ಳಲಾಗುವುದು, ದೇಶದ ಪ್ರತಿಯೊಬ್ಬರಿಗೂ 25 ಲಕ್ಷ ರೂಗಳವರೆಗೆ ವೈದ್ಯಕಿಯ ಸೇವೆ ನೀಡಲು ಆರೋಗ್ಯ ವಿಮೆ ಮಾಡಿಸಲಾಗುವುದು, ಭಾರತೀಯ ಸೇನೆಗೆ ನೇಮಕ 4 ವರ್ಷ ಮಾತ್ರ ನೇಮಕ ಮಾಡಿಕೊಳ್ಳುವ ಅಗ್ನಿ ಪಥ್ ಯೋಜನೆ ರದ್ದು ಪಡಿಸುವುದು ಸೇರಿದಂತೆ ಒಟ್ಟು 25 ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಲು ಪ್ರಣಾಳಿಕೆ ಬಿಡುಗಡೆಗೊಳಿಸಲಾಗಿದೆ.

ಈ ನಿಟ್ಟಿನಲ್ಲಿ ಸಶಕ್ತ ಹಾಗೂ ಸದೃಡ ಭಾರತ ಕಟ್ಟಲು ಈ ಬಾರಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಭೂತಗಳಲ್ಲಿನ ಜನರಿಗೆ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ ಕಾಂಗ್ರೇಸ್ ಗೆಲ್ಲಿಸಲು ಶ್ರಮಿಸಬೇಕಿದೆ.

ವಿಜಯಪುರ ಲೋಕಸಭಾ ಮತಕ್ಷೇತ್ರದ ರಾಜು ಆಲಗೂರವರು ಒಬ್ಬ ಪ್ರೋಪೇಸರ್ ಆಗಿ ಎರಡು ಬಾರಿ ಶಾಸಕರಾಗಿ ಸಕ್ರೀಯ ರಾಜಕಾರಣದಲ್ಲಿ ಎಲ್ಲ ಸಮಾಜ ಬಾಂಧವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆಲ್ಲದೇ ಅತ್ಯಂತ ಸರಳ ಸಜ್ಜನ ರಾಜಕಾರಿಣಿಗೆ ಹೆಸರಾದವರು ಅವರ ಗೆಲಿಸಲು ಯುವಕರು ಒಂದಾಗಬೇಕು ಸಶಕ್ತ ಹಾಗೂ ಸದೃಡ ಭಾರತ ಕಟ್ಟಲು ಈ ಬಾರಿ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಲು ಕಾರ್ಯಕರ್ತರು ತಮ್ಮ ವ್ಯಾಪ್ತಿಯ ಭೂತಗಳಲ್ಲಿನ ಜನರಿಗೆ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ ಕಾಂಗ್ರೇಸ್ ಗೆಲ್ಲಿಸಲು ಶ್ರಮಿಸಬೇಕಿದೆ ಎಂದರು.

ಈ ವೇಳೆ ಕರ್ನಾಟಕ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮೀತಿಯ ತಾಲೂಕಾ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಅವರು ಮಾತನಾಡಿ ಬಿಜೆಪಿಯವರಿಗೆ ಶಾಸಕರನ್ನು ಖರಿದಿ ಮಾಡಿ ಅಧಿಕಾರ ಹಿಡಿಯುವುದೊಂದೆ ಅವರ ಉದ್ದೇಶವೆ ಹೊರತು ಜನರ ಸೇವೆ ಮಾಡುವ ಯಾವ ಇಚ್ಚೇ ಇಲ್ಲ ಆದರೇ ಕಾಂಗ್ರೇಸ್ ಸರಕಾರದ ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿಯವರು ಉಳುವವರೇ ಭೂ ಒಡೇಯ ಎಂಬ ಕಾಯ್ದೆ ಜಾರಿಗೆ ತರುವ ಮೂಲಕ ಲಕ್ಷಾಂತರ ರೈತರ ಬದುಕಿಗೆ ಆಶ್ರಯ ನೀಡಿದ್ದಾರೆ. ಮೂರು ಬಾರಿ ವಿಜಯಪುರ ಜಿಲ್ಲಾ ಸಂಸದರಾದ ರಮೇಶ ಜಿಗಜಿಣಗಿಯವರನ್ನು ಜನ ಗೆಲ್ಲಿಸಿ ಪಾರ್ಲಿಮೇಂಟ್ ಗೆ ಕಳುಹಿಸಿದರೂ ಒಂದು ದಿನವೂ ನಮ್ಮ ಮತಕ್ಷೇತ್ರದ ರೈತರ ಸಂಕಷ್ಟಕ್ಕೆ ಸ್ಪಂದಿಸಲಿಲ್ಲ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿಲ್ಲ ಒಂದು ದಿನವೂ ನಮ್ಮ ಭಾಗಕ್ಕೆ ಬಂದು ಜನರ ಕಷ್ಟ ಆಲಿಸಲಿಲ್ಲ ಇಂತಹವರು ನಮಗೆ ಅಗತ್ಯವಿಲ್ಲ ರವೇಶ ಜಿಗಜಿಣಗಿಯವರ ಸಾಧನೆ ಶೂನ್ಯವಾಗಿದೆ ಎಂದರು.
ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಎಂ.ಬಿ. ನಾವದಗಿ,ಬಿ.ಕೆ ಬಿರಾದಾರ,ಸರಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮೀತಿಯ ತಾಲೂಕಾ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ,ವಾಯ್ ಎಚ್ ವಿಜಯಕರ,ರಾಯನಗೌಡ ತಾತರಡ್ಡಿ, ತಾಲೂಕಾ ಕುರುಬ ಸಮಾಜ ಅಧ್ಯಕ್ಷ ಮಲ್ಲಿರ‍್ಜುನ ಮದರಿ, ತಾಲೂಕಾ ಮಹಿಳಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷೆ ಶೋಭಾ ಶಳ್ಳಗಿ,ಸದ್ದಾಂ ಕುಂಟೋಜಿ,ತಾಲೂಕಾ ಯೂಥ್ ಕಾಂಗ್ರೇಸ್ ಅಧ್ಯಕ್ಷ ಮಹಮ್ಮದರಫೀಕ ಶಿರೋಳ, ಬಾಪುರಾಯ ದೇಸಾಯಿ(ಹಡಗಲಿ). ಸುಜಾತಾ ಶಿಂಧೇ,ಎಸ್. ಆರ್. ಕಟ್ಟಿಮನಿ,ತಿಪ್ಪಣ್ಣ ದೊಡಮನಿ, ಎಂ. ಆರ್. ನಾಯಕ ಇವರುಗಳು ಉಪಸ್ಥಿತರಿದ್ದರು.

RELATED ARTICLES
- Advertisment -spot_img

Most Popular

error: Content is protected !!