ಬೆಳಗಾವಿ: ಜಿಲ್ಲಾ ಪರವಾನಗಿ ಭೂಮಾಪಕರ ಸಂಘ (ರಿ) ಇವರಿಂದ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಪದನಿಮಿತ್ತ ಭೂ ದಾಖಲೆಗಳ ಉಪ ನಿರ್ದೇಶಕರಿಗೆ ಬುಧವಾರ (ಫೆ.14) ಜಿಲ್ಲೆಯ ಪರವಾನಗಿ ಭೂಮಾಪಕರ ಕಚೇರಿಯ ದಿನನಿತ್ಯದ ಕೆಲಸದಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಸಲ್ಲಿಸಲಾಯಿತು.
ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ನಿಗದಿತ ವೇತನವನ್ನು ನಿಗದಿಪಡಿಸದೆ ಆಕಾರ ಬಂದ್ ಡಿಜಿಟೈಸೇಶನ್ ಮಾಡಲು ಪರವಾನಗಿ ಭೂಮಾಪಕರಿಗೆ ವಿಪರೀತವಾದ ಒತ್ತಡ ತರುತ್ತಿದ್ದು ಅಲ್ಲದೇ ಪರವಾನಿಗೆ ಭೂಮಾಪಕರಿಗೆ ಮಾಹಿತಿ ನೀಡದೆ ಏಕಾಏಕಿ ಅವರ ಲಾಗಿನ್ ಗಳನ್ನು ಡಿ ಆಕ್ಟಿವೇಟ್ ಮಾಡಿ ಡಿಜಿಟೈಸೇಶನ್ ಕಾರ್ಯಕ್ಕೆ ಆದೇಶ ಮಾಡುತ್ತಿದ್ದು ಈ ಕೂಡಲೇ ಸದರಿ ಆದೇಶವನ್ನು ಹಿಂಪಡೆಯಬೇಕೆಂದು ಮನವಿ ಮಾಡಲಾಯಿತು.
ಒಂದು ವೇಳೆ ಆದೇಶ ಮಾಡಿದ್ದಲ್ಲಿ ಕಚೇರಿಯ ಸರ್ಕಾರಿ ಭೂಮಾಪಕರಿಗೆ ಸಿಗುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಹಾಗೂ ಸಮಾನ ವೇತನವನ್ನು ಪರವಾನಗಿ ಭೂಮಾಪಕರಿಗೂ ನೀಡಿದ್ದಲ್ಲಿ ಮಾತ್ರ ಆಕಾರಬಂದ ಗಣಕೀಕರಣ ಮಾಡುತ್ತೇವೆ
ಸರ್ಕಾರದ ನೂತನ ರೈತ ಸಹಾಯಕ ಸ್ವಾವಲಂಬಿ ಯೋಜನೆಯನ್ನು ಕಚೇರಿಯ ಸಿಬ್ಬಂದಿಗಳು ಕಚೇರಿಯ ಮಧ್ಯವರ್ತಿಗಳೊಂದಿಗೆ ಸೇರಿ ಸ್ವಾವಲಂಬಿ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದ್ದರಿಂದ ವರವಾನಗಿ ಭೂಮಾಪಕರುಗಳಿಗೆ ಕಡತ ಹಂಚಿಕೆ ಕಡಿಮೆಯಾಗಿದ್ದು ಜೀವನ ನಡೆಸಲು ತೊಂದರೆಯಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ ಪರವಾನಗಿ ಭೂಮಾಪಕರುಗಳಿಗೆ ಭೂ.ದಾ.ಸ.ನಿ.ಕ ಕಚೇರಿಯಲ್ಲಿ ಸರಿಯಾಗಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಬೇಕು.
ಪ್ರತಿಯೊಬ್ಬ ಪರವಾನಗಿ ಭೂಮಾಪಕರುಗಳಿಗೆ ಭೂ.ದಾ.ಸ.ನಿ.ಯವರು ಪರ್ಯಾಯವೇಕ್ಷಕರು. ವಿಷಯ ನಿರ್ವಾಹಕರು, ಸಿಬ್ಬಂದಿ ವರ್ಗದವರು ಮತ್ತು ಅಭಿಲೇಖಾಲಯದ ನಿರ್ವಾಹಕರು ಸೇರಿದಂತೆ ಎಲ್ಲರೂ ಕೆಲಸ ಮಾಡಲು ಪೂರಕವಾದ ಹಾಗೂ ಉತ್ತಮವಾದ ವಾತಾವರಣ ನಿರ್ಮಿಸಬೇಕು ಎಂದು ಮನವಿ ಮಾಡಿಕೊಂಡರು.
***