Wednesday, October 15, 2025
Google search engine
Homeಜಿಲ್ಲಾಕನ್ನಡಕ್ಕೆ ಅವಮಾನಿಸುವ ಯಾವುದೇ ಚಟುಚಟಿಕೆಗಳು ಪಾಲಿಕೆಯಲ್ಲಿ ನಡೆದರೆ ಕರವೇ ಕಾರ್ಯಕರ್ತರು ಪಾಲಿಕೆಗೆ ಮುತ್ತಿಗೆ ಹಾಕಿ ತಕ್ಕ...
spot_img

ಕನ್ನಡಕ್ಕೆ ಅವಮಾನಿಸುವ ಯಾವುದೇ ಚಟುಚಟಿಕೆಗಳು ಪಾಲಿಕೆಯಲ್ಲಿ ನಡೆದರೆ ಕರವೇ ಕಾರ್ಯಕರ್ತರು ಪಾಲಿಕೆಗೆ ಮುತ್ತಿಗೆ ಹಾಕಿ ತಕ್ಕ ಪಾಠ ಕಲಿಸುತೇವೆ

ಬೆಳಗಾವಿ: ಪಾಲಿಕೆಯಲ್ಲಿ ಕನ್ನಡ ಕಡ್ಡಾಯವನ್ನು ಮುಂದುವರೆಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗುರುವಾರ ಮಹಾನಗರ ಪಾಲಿಕೆ ಮುಂಭಾಗದಲ್ಲಿ ಪ್ರತಿಭಟಿಸಿ ಮಹಾನಗರ ಪಾಲಿಕೆ ಮೇಯರ್ ಅವರಿಗೆ ಮನವಿ ಸಲ್ಲಿಸಿದರು.

ನಗರದ ಬೆಳಗಾವಿ ಮಹಾನಗರದಲ್ಲಿ ಸರ್ಕಾರದ ಆದೇಶದ ಪ್ರಕಾರ ಕನ್ನಡವನ್ನು ಕಡ್ಡಾಯಗೊಳಿಸುವ ಎಲ್ಲ ಕ್ಷೇತ್ರಗಳಲ್ಲಿ ಕನ್ನಡದ ಅನುಷ್ಠಾನ ಮಾಡುವ ಕಾರ್ಯ ನಡೆದಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೆಳಗಾವಿ ಮಹಾನಗರ ಪಾಲಿಕೆಗೆ ಭೇಟಿ ನೀಡಿ ಪಾಲಿಕೆಯಲ್ಲಿ ಕನ್ನಡ ಫಲಕ ಹಾಕಿಸುವ ಜೊತೆಗೆ ಕನ್ನಡ ಕಲಿಕಾ ಕೇಂದ್ರವನ್ನು ಪಾಲಿಕೆಯಲ್ಲಿ ಆರಂಭಿಸಲು ಕ್ರಮಕೈಗೊಂಡಿದ್ದರು.

ಬೆಳಗಾವಿ ಮಹಾರಾಷ್ಟ್ರ ಏಕೀಕರಣ ಸಮೀತಿಯ ಪುಂಡರು ತಮ್ಮನ್ನು ಭೇಟಿಯಾಗಿ ಕನ್ನಡದ ಫಲಕಗಳನ್ನು ತೆರವು ಮಾಡುವಂತೆ ಪುಂಡಾಟಿಕೆ ನಡೆಸಿದ್ದು ಯಾವುದೇ ಕಾರಣಕ್ಕೂ ತಾವು ಎಂಎಸ್ ಪುಂಡರ ಪುಂಡಾಟಿಕೆಗೆ ಹೆದರದೇ ಬೆಳಗಾವಿ

ಎಂಈಎಸ್ ಪುಂಡರ ಮಾತು ಕೇಳಿ ಕನ್ನಡಕ್ಕೆ ಅವಮಾನಿಸುವ ಯಾವುದೇ ಚಟುಚಟಿಕೆಗಳು ಪಾಲಿಕೆಯಲ್ಲಿ ನಡೆದರೆ ಕರವೇ ಕಾರ್ಯಕರ್ತರು ಪಾಲಿಕೆಗೆ ಮುತ್ತಿಗೆ ಹಾಕಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ವಿರೋಧಿ ಚಟುವಟಿಕೆ ನಡೆದರೆ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವದು ಎಂದು ಈ ಮನವಿ ಮೂಲಕ ಎಚ್ಚರಿಕೆ ನೀಡುತ್ತಿದ್ದೇವೆ.

RELATED ARTICLES
- Advertisment -spot_img

Most Popular

error: Content is protected !!