ಬೆಳಗಾವಿ: ಬೆಳಗಾವಿಯ ತಾಲೂಕಿನ ಕಡೋಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇವಗಿರಿ ಗ್ರಾಮದಲ್ಲಿ ಲಿಂಗಾಯತ ಸ್ಮಶಾನ ಜಮೀನು ಕಬಳಿಸಲು ಯತ್ನ ಆರೋಪಿಸಿ ಪ್ರತಿಭಟನೆ
ಗ್ರಾಮದ ಸರ್ವೇ ನಂಬರ್ 123/8ರಲ್ಲಿ ಬರುವ 1ಎಕರೆ 16ಗುಂಟೆ ಸ್ಮಶಾನ ಜಮೀನು. ಇದನ್ನು ವ್ಯಕ್ತಿಯೊಬ್ಬ ತಕರಾರು ತೆಗೆದು ಜಮೀನು ಕಬಳಿಸಲು ಯತ್ನಿಸುತ್ತಿದ್ದಾರೆ.ಹೀಗಾಗಿ ಮೊದಲಿನಂತೆ ಅಂತ್ಯಸಂಸ್ಕಾರಕ್ಕೆ ಜಮೀನು ಮೀಸಲಿಡಬೇಕು. ತಕರಾರು ಮಾಡೋ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಬಳಿಕ ಉಸ್ತುವಾರಿ ಸಚಿವರ ಆಪ್ತ ಸಹಾಯಕ ಮಲಗೌಡ ಪಾಟೀಲ್ ಗೆ ದೇವಗಿರಿ ಗ್ರಾಮಸ್ಥರು ಮನವಿ ಸಲ್ಲಿಸಿದರು