ಬೆಳಗಾವಿ : ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜೀಯವರು ಭಾರತದ ವಿಕಾಸಕ್ಕಾಗಿ ಮಾಡಿರುವ ರಚನಾತ್ಮಕ ಅಡಿಪಾಯದಿಂದಾಗಿ ನಮ್ಮ ದೇಶವು 2047 ರಲ್ಲಿ ಜಾಗತಿಕ ಮಟ್ಟದಲ್ಲಿ ಬಲಿಷ್ಠ ದೇಶವಾಗಲಿದೆ ಎಂದು ಶುಕ್ರವಾರ ಇಲ್ಲಿಯ ಕೆ.ಎಲ್.ಇ. ಕನ್ವೆನ್ಸನ್ ಸೆಂಟರನಲ್ಲಿ ಪ್ರಯಾಸ ಎಕ್ಸಿಬಿಶನ್ನಿನ ವತಿಯಿಂದ ಆಯೋಜಿಸಲ್ಪಟ್ಟ “ವಿಜನ್ ಕರ್ನಾಟಕ 2025″ ರ ಮಹಾಪ್ರದರ್ಶನದ ಸಮಾರೋಪ ಪ್ರಸಂಗದಲ್ಲಿ ಸಂಸದರಾದ ಜಗದೀಶ ಶೆಟ್ಟರರು ಆತ್ಮವಿಶ್ವಾಸದಿಂದ ತಮ್ಮ ಅನಿಸಿಕೆಯನ್ನು ಹೀಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಬೆಳಗಾವಿಯ ಮಹಾಪೌರರಾದ ಮಂಗೇಶ ಪವಾರ, ವೇದಾ ಇಂಟರನ್ಯಾಶನಲ್ ಶಾಲೆಯ ಚೇಅರಮನ್ ರಾದ ಶ್ರೀಮತಿ ಶಿಲ್ಪಾ ಶೆಟ್ಟರ, ನಗರಸೇವಕ ಶ್ರೇಯಸ್ ನಾಕಾಡಿ, ಡಿಎಫ್ಸಿಸಿಐದ ಜಿಜಿಎಮ್ ಎಸ್. ಪಿ. ವರ್ಮಾ, ಐಸಿಎಂಆರ್ನ ಸಂಚಾಲಿಕೆ ಜ್ಯೋತಿ ಭಟ್ಟ, ಪ್ರಯಾಸ ಎಕ್ಸಿಬಿಶನ್ನಿನ ಚೇಅರಮನ್ರಾದ ವನಿಶ ಗುಪ್ತಾ, ಸಂಚಾಲಿಕಾ ಮೀತು ಪಾಲ, ಸಂಚಾಲಿಕಾ ಜ್ಯೋತಿಕಾ ಅರೋರಾ ಇವರು ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಮೂರು ದಿನಗಳ ಕಾಲ ನಡೆದ ಈ ಪ್ರದರ್ಶನವು ಶುಕ್ರವಾರ ವಿಜೃಂಭಣೆಯಿಂದ ಸಮಾರೋಪಗೊಂಡಿತು. ಮುಂದೆ ಸಂಸದರಾದ ಶೆಟ್ಟರರು ಪ್ರಯಾಸ ಎಕ್ಸಿಬಿಶನ್ನಿನ ಉತ್ತಮ ಪ್ರದರ್ಶನಕ್ಕೆ ಮನಃಪೂರ್ವಕವಾಗಿ ಅಭಿನಂದಿಸಿದರು. ಪ್ರದರ್ಶನಕ್ಕೆ ಬೆಳಗಾವಿ ರಹಿವಾಸಿಗಳು ಉತ್ತಮವಾಗಿ ಸ್ಪಂದಿಸಿದರೆಂದು ಹೇಳಿದರು. ಮೊದಲನೆ ದಿನ 5 ಸಾವಿರ, ಎರಡನೆ ದಿನ ಎಂಟು ಸಾವಿರ ಮತ್ತು ಮೂರನೇ ದಿನ ಏಳು ಸಾವಿರ ಹೀಗೆ ಮೂರು ದಿನಗಳಲ್ಲಿ ಇಪತ್ತಕ್ಕೂ ಹೆಚ್ಚು ಸಾವಿರ ಜನರು ಪ್ರದರ್ಶನವನ್ನು ವೀಕ್ಷಿಸಿದರು. ಇದರಲ್ಲಿ ಶಾಲಾ-ಕಾಲೇಜುಗಳ ವಿದ್ಯಾರ್ಥಿ, ಶಿಕ್ಷಕರು, ಪಾಲಕರು ಉದ್ಯೋಜಕರು, ಕೃಷಿಕರು, ಆಡಳಿತಾಧಿಕಾರಿಗಳೂ ಸಹ ಭಾಗವಹಿಸಿದ್ದರು. ಇಷ್ಟು ಬೆಂಬಲ ಈ ಪ್ರದರ್ಶನಕ್ಕೆ ಬೆಳಗಾವಿಯ ಜನರಿಂದ ದೊರೆತಿದ್ದನ್ನು ಅವರು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಭಾಜಪದ ಜಿಲ್ಲಾ ಸೆಕ್ರೆಟರಿ ನಾಗರಾಜ ಪಾಟೀಲರನ್ನು ಶೆಟ್ಟರರು ವಿಶೇಷವಾಗಿ ಸನ್ಮಾನಿಸಿದರು.
ಈ ಮಧ್ಯೆ ಮಾಜಿ ಶಾಸಕರಾದ ಮಹಾಂತೇಶ ಕವಠಗಿಮಠ ಮತ್ತು ಜಿಲ್ಲಾ ಪಂಚಾಯತ ಸಿಇಓ ರಾಹುಲ ಶಿಂಧೆ ಇವರು ಭೇಟಿ ಕೊಟ್ಟು ಪ್ರದರ್ಶನಕ್ಕೆ ಶುಭಾಷಯ ಕೋರಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ದಿಶಾ ಹರಿಕಾಂತ ಇವರು ಬಸವ ದೀಕ್ಷಾ ಮತ್ತು ಕೆ. ದೀಕ್ಷಾ ಇವರು ಭರತನಾಟ್ಯದ ಮೂಲಕ ಶ್ರೀ ಗಣೇಶನಿಗೆ ವಂದಿಸಿದರು. ಕಾರ್ಯಕ್ರಮದ ಸೂತ್ರ ಸಂಚಲನವನ್ನು ಸುನಿತಾ ದೇಸಾಯಿ ಇವರು ಮಾಡಿದರೆ ಅದಿತಿ ಸಕ್ಷೆನಾ ಇವರು ವಂದನಾರ್ಪಣೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ವಿಶಾಲ ಮಲಿಕ, ದತ್ತಾ ಥೋರೆ, ಸಂತೋಷ ಪವಾರ, ವಿನೋದ ಕುಮಾರ, ಮೊಹಮ್ಮದ ಅಫಝಲ್, ರಾಧಿಕಾ ಚೌಹಾಣ, ಕಿಂಜಲ ಗಾಂಧಿ, ಮಹಕ ಇಬ್ರಾನಿ, ಪುಷ್ಕರ ಪರಿಹಾರ, ಮನ್ನತ ಚಾವಲಾ, ಅನೀಶ ಯಾದವ, ಅಮೀಷಾ ಸೆಕ್ಸೆನಾ, ಮೊಹಮ್ಮದ ಖಾನ ಹಾಗೂ ಇತರರು ವಿಶೇಷ ಪರಿಶ್ರಮ ಪಟ್ಟಿದ್ದಾರೆ.
ಚೌಕಟ್ಟಿನಲ್ಲಿ :ಸಹಭಾಗಿಯಾದ ಸರಕಾರಿ ಸಂಸ್ಥೆಗಳಿಗೆ ಪಾರಿತೋಷಕಗಳನ್ನು ಕೊಟ್ಟು ಸನ್ಮಾನಿಸಲಾಯಿತು. ಈ ಪ್ರದರ್ಶನದಲ್ಲಿ ಸಹಭಾಗಿಯಾದ ಸರಕಾರಿ ಸಂಸ್ಥೆಗಳಿಗೆ ಬೆಸ್ಟ್ ಸ್ಟಾಲ್ ಅವಾರ್ಡ ಕೊಟ್ಟು ಸನ್ಮಾನಿಸಲಾಯಿತು. ಬೆಸ್ಟ್ ಸ್ಟಾಲ್ ಇನ್ ಹೆಲ್ಡ್ ಃ ಐಸಿಎಂಆರ್ ಮತ್ತು ಸಿಸಿಆರ್ಎಸ್, ಬೆಸ್ಟ್ ಸ್ಟಾಲ್ ಇನ್ ಮೈನಿಂಗ್ : ಜಿಎಸ್ಆಈ, ಬೆಸ್ಟ್ ಸ್ಟಾಲ್ ಸ್ಪೇಸ್ : ಇಸ್ರೋ, ಬೆಸ್ಟ್ ಸ್ಟಾಲ್ ವಾಟರ ರಿಸೋಸ್ ಆ್ಯಂಡ ಅಗ್ರಿಕಲ್ಟರ್, ಸೆಂಟರ್ ವಾಟರ್ ಕಮಿಶನ್, ಡಿಪಾರ್ಟಮೆಂಟ್ ಆಫ್ ಹಾಲ್ಟಿಕಲ್ಟರ್ ಆ್ಯಂಡ್ ಪ್ಲಾಂಟೇಶನ್ ಕ್ರಾಪ್ ತಮೀಳನಾಡು, ಡೈರೆಕ್ಟರೇಟ ಆಫ್ ಹೊಲಾಕಲ್ವರ ಆ್ಯಂಡ್ ಫಾರ್ಮ ಫಾರೆಸ್ಟ್ರಿ ಛತ್ತಿಸಗಡ, ಬೆಸ್ಟ್ ಸ್ಟಾಲ್ ಇನ್ ರಿಸರ್ಚ : ಡಿಆರ್ಡಿಓ, ಸಿಎಸ್ಐಆರ್, ವ್ಹಾಯಿಟ್ ಬ್ಯಾನ್ ಅಸೋಸಿಯೇಟ್, ಬೆಸ್ಟ್ ಸ್ಟಾಲ ಇನ್ ಟ್ರಾನ್ಸ್ಪೋರ್ಟ : ಡಿಎಫ್ಸಿಸಿಐಎಲ್, ಎನ್ಸಿಆರ್ಟಿಸಿ, ಬೆಸ್ಟ್ ಸ್ಟಾಲ್ ಅವೇರನೆಸ್ : ಆರ್ಬಿಐ, ಎನ್ಐಸಿ, ಬೆಸ್ಟ್ ಸ್ಟಾಲ್ ಆರ್ಟ ಆ್ಯಂಡ್ ಕಲ್ಟರ್ ಃ ಲಲಿತ ಕಲಾ ಅಕ್ಕಾಡಮಿ ಚೆನ್ನೈ ಮಂತಾದವರು ಪಾಲ್ಗೊಂಡು ಯಶಸ್ಸಿಗೆ ಕಾರಣೀಭೂತರಾದರು.