Wednesday, June 18, 2025
Google search engine
Homeಜಿಲ್ಲಾವಿಜನ್ ಕರ್ನಾಟಕ 2025 " ಪ್ರದರ್ಶನದ ಎರಡನೇ ದಿನ ಎಂಟು ಸಾವಿರ ಜನ ಭೇಟಿ
spot_img

ವಿಜನ್ ಕರ್ನಾಟಕ 2025 ” ಪ್ರದರ್ಶನದ ಎರಡನೇ ದಿನ ಎಂಟು ಸಾವಿರ ಜನ ಭೇಟಿ

ಬೆಳಗಾವಿ : ಸಂಸದರಾದ ಜಗದೀಶ ಶೆಟ್ಟರ ಇವರ ಪ್ರೇರಣೆ ಮತ್ತು ಮಾರ್ಗ ದರ್ಶನದಂತೆ ದಿಲ್ಲಿಯಲ್ಲಿಯ ಪ್ರಯಾಸ ಎಕ್ಸಿಬಿಷನ್ ಪರವಾಗಿ ಕೆ.ಎಲ್.ಇ. ಕನ್ವೆನ್ಸನ ಹಾಲ್ ನಲ್ಲಿ ನಡೆಯುತ್ತಿರುವ ‘ವಿಜನ್ ಕರ್ನಾಟಕ 2025’ ರ ಮಹಾಪ್ರದರ್ಶನಕ್ಕೆ ಎರಡನೇ ದಿನದಂದು ಬೆಳಗಾವಿಯ ಎಂಟು ಸಾವಿರ ಜನರು ಪ್ರದರ್ಶನವನ್ನು ವೀಕ್ಷಿಸಿದರು. ಪ್ರದರ್ಶನವು ಜೂನ್ 13 ರಂದು ಶೆಟ್ಟರ ಇವರ ಉಪಸ್ಥಿತಿಯಲ್ಲಿ ಸಮಾರೋಪಗೊಳ್ಳಲಿದೆ.

ಬೆಳಗಾವಿಯಲ್ಲಿಯ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಈ ಪ್ರದರ್ಶನ ನೋಡಿ ಆನಂದಿಸಿದರು. ಮೊದಲನೆ ದಿನದ ಯಶಸ್ವಿ ಪ್ರತಿಕ್ರಿಯೆಯಿಂದ ಎರಡನೆ ದಿನವೂ ವಿದ್ಯಾರ್ಥಿಗಳು, ಪಾಲಕರು, ಬೆಳಗಾವಿಯಲ್ಲಿಯ ವ್ಯಾಪಾರಸ್ಥರು, ಉದ್ಯೋಜಕರು ಪ್ರದರ್ಶನಕ್ಕೆ ಭೇಟಿ ಕೊಟ್ಟು ಸಂತಸ ವ್ಯಕ್ತಪಡಿಸಿದರು. ಈ ಪ್ರಕಾರದ ಪ್ರದರ್ಶನ ಬೆಳಗಾವಿಯಲ್ಲಿ ಮೊದಲ ಬಾರಿ ಪ್ರದರ್ಶನಗೊಳ್ಳುತ್ತಿದೆ ಎಂದು ಹೇಳಿದರು.

ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶನವು ಶುಕ್ರವಾರ ದಿ. 13 ರಂದು ಮಧ್ಯಾಹ್ನ 1-30 ಕ್ಕೆ ಮುಕ್ತಾಯಗೊಳ್ಳಲಿದ್ದು, ಇದರಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಉಪಸ್ಥಿತರಿರಬೇಕೆಂದು ಗ್ರಾಮೀಣ ಜಿಲ್ಲಾಧ್ಯಕ್ಷರಾದ ಸುಭಾಷ ಪಾಟೀಲ, ನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ ಮತ್ತು ಜಿಲ್ಲಾ ಮಹಾನಗರ ಸೆಕ್ರೆಟರಿಯಾದ ನಾಗರಾಜ ಪಾಟೀಲರೊಂದಿಗೆ ಇನ್ನಿತರರು ವಿನಂತಿಸಿಕೊಂಡಿದ್ದಾರೆ.

RELATED ARTICLES
- Advertisment -spot_img

Most Popular

error: Content is protected !!