Thursday, June 19, 2025
Google search engine
Homeಜಿಲ್ಲಾಮುಸ್ಲಿಂ ಧರ್ಮಗ್ರಂಥ ಕುರಾನ್ ಸುಟ್ಟ ಪ್ರಕರಣದಲ್ಲಿ ಅಮಾಯಕರನ್ನ ಬಂಧಿಸದಂತೆ ;ಹಿಂದು ಸಂಘಟನೆಗಳ ಎಚ್ಚರಿಕರೆ
spot_img

ಮುಸ್ಲಿಂ ಧರ್ಮಗ್ರಂಥ ಕುರಾನ್ ಸುಟ್ಟ ಪ್ರಕರಣದಲ್ಲಿ ಅಮಾಯಕರನ್ನ ಬಂಧಿಸದಂತೆ ;ಹಿಂದು ಸಂಘಟನೆಗಳ ಎಚ್ಚರಿಕರೆ

ಬೆಳಗಾವಿ : ಮುಸ್ಲಿಮರ ಧರ್ಮಗ್ರಂಥ ಕುರಾನ್‌ ಸುಟ್ಟ ಪ್ರಕರಣದಲ್ಲಿ ಅಮಾಯಕ ಹಿಂದೂ ಯುವಕರ ಮೇಲೆ ಪೋಲಿಸರು ಕಿರುಕುಳ ನೀಡುತ್ತಿದ್ದಾರೆ. ನಿಜವಾದ ಆರೋಪಿಗಳನ್ನ ಬಂಧನ ಮಾಡುವಂತೆ ಪ್ರತಿಭಟನೆ ನಡೆಸಲಾಯಿತು.

ನಗರದ ಚೆನ್ನಮ್ಮ ವೃತ್ತದಲ್ಲಿ ವಿವಿಧ ಹಿಂದೂಪರ ಸಂಘಟನೆಗಳು ಹಾಗೂ‌ ಸಂತಿಬಸ್ತವಾಡ ಗ್ರಾಮದ ಜನರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ ರಾಜ್ಯ ಸರ್ಕಾರ ಪೊಲೀಸರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು. ಇದೇ ವೇಳೆ ಚೆನ್ನಮ್ಮ ವೃತ್ತದಲ್ಲಿ ಅರ್ಧಗಂಟೆಗೂ ಹೆಚ್ಚುಕಾಲ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿ ಜಿಲ್ಲಾ ಅಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಕಳೆದೊಂದು ವಾರದ ಹಿಂದೆ ಸಂತಿಬಸ್ತವಾಡ ಗ್ರಾಮದಲ್ಲಿ ಮಸೀದಿಯಲ್ಲಿದ್ದ ಕುರಾನ್, ಹದ್ದೀಸ್ ಪುಸ್ತಕವನ್ನ ಹೊತ್ತೊಯ್ದ  ಕಿಡಿಗೇಡಿಗಳು ಸುಟ್ಟುಹಾಕಿದ್ದರು. ಆದರೆ, ಈ ಪ್ರಕರಣದಲ್ಲಿ ಕಿಡಿಗೇಡಿಗಳನ್ನು ಹಿಡಿಯುದನ್ನು ಬಿಟ್ಟು ಗ್ರಾಮದ ಅಮಾಯಕ ಯುವಕರನ್ನು ಪೋಲಿಸ್ ಠಾಣೆಗೆ ಕರೆದುಕೊಂಡು ಹೋಗಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ.ಇದರಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಕುರಾನ್ ಸುಟ್ಟ ದಿನ ಮಸೀದಿಯಲ್ಲಿ ಅಳವಡಿಸಿದ ಸಿ.ಸಿಟಿವಿ ಯಾಕೆ? ತೆಗೆದರು. ಮಸೀದಿಯ ಪ್ರಾರ್ಥನಾ ಮಂದಿರದ ಕೀಲಿಯನ್ನು ಯಾರು ಓಪನ್ ಮಾಡಿದ್ರುವಮೌಲಾನ್ ಅನುಮಾನಸ್ಪದವಾಗಿ ಮಸೀದಿಯನ್ನು ಬಿಟ್ಟು ಊರಿಗೆ ಹೋಗಿದ್ದು ಯಾಕೆ? ಎಂದು ಹಿಂದೂಪರ ಸಂಘಟನೆ ಮುಖಂಡರು ಪ್ರಶ್ನಿಸಿದ್ದಾರೆ. ಅಮಾಯಕ ಯುವಕರನ್ನ ಬಂಧನ ಮಾಡದೇ ನಿಜವಾದ ಅಪರಾಧಿಗಳನ್ನು ಪತ್ತೆಹಚ್ಚಿ ಪೊಲೀಸರು ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ‌

ಪ್ರತಿಭಟನೆಯಲ್ಲಿ ಮಾಜಿ ಶಾಸಕ ಸಂಜಯ್ ಪಾಟೀಲ್, ಬಿಜೆಪಿ ಗ್ರಾಮೀಣ ಅಧ್ಯಕ್ಷ ಧನಂಜಯ್ ಜಾಧವ್, ಶ್ರೀರಾಮಸೇನೆ ಹಿಂದೂಸ್ತಾನ್ ಸಂಸ್ಥಾಪಕ ರಮಾಕಾಂತ್ ಕೊಂಡುಸ್ಕರ್, ಶ್ರೀರಾಮಸೇನೆ ಅಧ್ಯಕ್ಷ ರವಿ ಕೋಕಿತ್ಕರ್ ಸೇರಿ ಸಂತಿಬಸ್ತವಾಡ ಗ್ರಾಮಸ್ಥರು, ಹಿಂದೂಪರ ಸಂಘಟನೆ ಕಾರ್ಯಕರ್ತರಿದ್ದರು.

RELATED ARTICLES
- Advertisment -spot_img

Most Popular

error: Content is protected !!