ಬೆಳಗಾವಿ : ಜಾತ್ರೆ ನಿಮಿತ್ತ ಎತ್ತಿನ ಬಂಡಿ ಓಡಿಸುವ ಸಂದರ್ಭದಲ್ಲಿ ಯುವಕ ಮೃತಪಟ್ಟ ದುರ್ಘಟನೆ ಬೆಳಗಾವಿ ಬಸವನ ಕುಡಚಿಯಲ್ಲಿ ನಡೆದಿದೆ.
ಅಪ್ಪಣ್ಣ ಪಾರಿಸ ಪಾಟೀಲ (27) ಮೃತ ಯುವಕ. ಸೋಮವಾರ ಬಸವನ ಕುಡಚಿ ಜಾತ್ರೆ ನಿಮಿತ್ತ ಎತ್ತಿನ ಬಂಡಿ ಓಡಿಸುವ ಸಂದರ್ಭದಲ್ಲಿ ಯುವಕ ಆಯತಪ್ಪಿ ಚಕ್ರದ ಕೆಳಗೆ ಬಿದ್ದು ಮೃತಪಟ್ಟಿರುತ್ತಾನೆ. ಮಾಳ ಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.