Thursday, June 19, 2025
Google search engine
Homeಜಿಲ್ಲಾಜನ ಜಾನುವಾರುಗಳಿಗೆ ಕುಡಿಯುವ ನೀರು ಬಿಡುವಂತೆ ಆಗ್ರಹ
spot_img

ಜನ ಜಾನುವಾರುಗಳಿಗೆ ಕುಡಿಯುವ ನೀರು ಬಿಡುವಂತೆ ಆಗ್ರಹ

ಬೆಳಗಾವಿ: ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ಮತ್ತು ಬಲ ದಂಡೆ, ಎಡ ದಂಡ ಹಾಗೂ ಚಿಕ್ಕೋಡಿ ಕಾಲುವೆಗಳ ಮುಖಾಂತರ ಜನ ಜಾನುವಾರುಗಳಿಗೆ  ಕುಡಿಯುವ ನೀರು ಬಿಡುವಂತೆ  ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಂದ ಬುಧುವಾರ ನಗರದಲ್ಲಿ ಪ್ರತಿಭಟಿಸಿ ಜಿಲ್ಲಾ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಇಲ್ಲಿನ ಜಿಲ್ಲಾ ಕಚೇರಿ ಆವರಣದಲ್ಲಿ  ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು  ಬೆಳಗಾವಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಹಿಡಕಲ್ ಜಲಾಶಯ ಹಾಗೂ ಘಟಪ್ರಭಾ ನದಿ ವ್ಯಾಪ್ತಿಯಲ್ಲಿರುವ ರೈತರು ಕೂಲಿಕಾರರು ಕೃಷಿ ಕಾರ್ಮಿಕರು ಜಮೀನುಗಳಲ್ಲಿ ಜನ ಜಾನುವಾರುಗಳನ್ನು ಕಟ್ಟಿಕೊಂಡು ವಾಸಿಸುತ್ತಿದ್ದೇವೆ. ಈಗ ಮಾರ್ಚ ತಿಂಗಳ ಮಧ್ಯ ಭಾಗ ಬಿಸಿಲಿನ ಬೇಗೆ ಅತೀಯಾಗಿರುತ್ತದೆ. ಕಾರಣ ಘಟಪ್ರಭಾ ನದಿ ಅದಕ್ಕೆ ಸಂಬಂಧಪಟ್ಟಂತಹ ಹಳ್ಳ ಕೊಳ್ಳಗಳು ಬಾವಿ ಮತ್ತು ಕೊಳವೆ ಬಾವಿಗಳು ಹಾಗೂ ಕೆರೆಗಳು ಬತ್ತಿ ಹೋಗಿರುತ್ತವೆ.

ಕಾರಣ ಜನ ಜಾನುವಾರುಗಳಿಗೆ ನೀರಿನ ದಾಹ ಅತೀಯಾಗಿದ್ದು ಹಿಡಕಲ್ ಜಲಾಶಯದಿಂದ ನೀರು ಬಿಡುವುದು ಅವಶ್ಯವಿದ್ದು  ತಕ್ಷಣ ನೀರಾವರಿ ನಿಗಮಗಳ ಸಭೆ ಕರೆದು ಜಲಾಶಯದ ನೀರಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಲಭ್ಯತೆಗೆ ಅನುಗುಣವಾಗಿ ನೀರು ನದಿಗೆ ಮತ್ತು ಕಾಲುವೆಗಳಿಗೆ ನೀರು ಹರಿಸುವುದು ಅವಶ್ಯವಿರುತ್ತದೆ.ಮಾರ್ಚ  ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ  ಸಭೆ ಕರೆದು ತಕ್ಷಣ ನೀರು ಬಿಡುವುದರ ಬಗ್ಗೆ ನಿರ್ಣಯ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಿವನಗೌಡ ಗೌಡರ, ವಿಭಾಗಿಯ ಅಧ್ಯಕ್ಷ ಈರನಗೌಡ ಪಾಟೀಲ, ಗೋಕಾಕ ತಾಲೂಕ ಅಧ್ಯಕ್ಷ ಬಾಳಪ್ಪ ಪಾಟೀಲ, ರೈತ ಮುಖಂಡ ಮಾರುತಿ ಥರಕಾರ ಸೇರಿಂದತೆ ಇತರರು ಇದರು.

RELATED ARTICLES
- Advertisment -spot_img

Most Popular

error: Content is protected !!