Thursday, June 19, 2025
Google search engine
Homeಕ್ರೈಂಸಾಲ ಪಡೆದವರು ವಾಪಸ್ ನೀಡದ ಕಾರಣ ವ್ಯಕ್ತಿಯೋರ್ವ ಮನನೊಂದು ಆತ್ಮಹತ್ಯೆಗೆ ಶರಣು..!
spot_img

ಸಾಲ ಪಡೆದವರು ವಾಪಸ್ ನೀಡದ ಕಾರಣ ವ್ಯಕ್ತಿಯೋರ್ವ ಮನನೊಂದು ಆತ್ಮಹತ್ಯೆಗೆ ಶರಣು..!

ಬೆಳಗಾವಿ:  ಬೆಳಗಾವಿ ತಾಲೂಕಿನ ಹುದಲಿ ಗ್ರಾಮದ ನಿವಾಸಿಯಾ ಅಡಿವೇಪ್ಪ ಕೊಂತಿ (38) ಎಂಬುವರು ಫೆ.28 ರಂದು ಸಾಲ ಪಡೆದವರು ಮರುಪಾವತಿ ಮಾಡುತಿಲ್ಲವೆಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.

ಅಡಿವೇಪ್ಪ ಕೊಂತಿ ಅವರು ಅಕ್ಷಯಕುಮಾರ ಮಳಗಲಿ (ಮಗ) ಎಂಬವರಿಗೆ 3,65,000 ಹಾಗೂ ಅಶೋಕ ಶಿವರಾಯಪ್ಪ ಮಳಗಲಿ(ಅಪ್ಪ) ಅವರಿಗೆ 9,80,000 ಒಟ್ಟು 13,45,000 ಲಕ್ಷ ರೂಗಳನ್ನು  ತಮ್ಮ ಊರಿನ ಅಪ್ಪ ಮತ್ತು ಮಗನಿಗೆ ಸಾಲ ನೀಡಿರುತ್ತಾರೆ.

ಹಣ ವಾಪಸ್ ಕೇಳಿದಾಗ ಇವರುಗಳ ನಡುವೆ ಹಣದ ವಿಷಯವಾಗಿ ವಾಗ್ವಾದವಾಗಿ ಹಣವನ್ನು ನಾವು ತೆಗೆದುಕೊಂಡಿಲ್ಲ ಎಂದು ಹೇಳಿದರಿಂದ ಮನನೊಂದ ಅಡಿವೇಪ್ಪ ಕೊಂತಿ ಅವರು ಫೆ.28 ರಂದು ಮಧ್ಯಾಹ್ನ 3 ಗಂಟೆಗೆ ಹುದಲಿ ಗ್ರಾಮದಲ್ಲಿ ವಿಷಕಾರಿ ಕ್ರಿಮಿ ನಾಶಕ ಔಷದನ್ನು ಕುಡಿದು ತಮ್ಮ ಸಂಬಂಧಿಕರಿಗೆ ಮೆಸೇಜ್ ಮಾಡಿ ಡೇತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ತಾಯಿ ಹಾಗೂ ಹೆಂಡತಿ ಮತ್ತು ಎರಡು ಗಂಡು ಮಕ್ಕಳು ತಮ್ಮಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಿ‌ ಎಂದು ಮಾರೀಹಾಳ ಪೋಲಿಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತಾರೆ.

RELATED ARTICLES
- Advertisment -spot_img

Most Popular

error: Content is protected !!