ಕಾಗವಾಡ: ಭೂ ಒತ್ತುವರಿ ಪ್ರಶ್ನಿಸಿದ ಮಹಿಳೆ ಮೇಲೆ ಹಲ್ಲೆ ನಡೆದ ಪ್ರಕರಣ ಕಾಗವಾಡ ತಾಲ್ಲೂಕಿನ ಐನಾಪುರ ಪಟ್ಟಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಬುಧವಾರ ಕಾಗವಾಡ ತಾಲ್ಲೂಕಿನ ಐನಾಪುರ ಪಟ್ಟಣದ ಸರ್ವೆ ನಂ-237/A ಆಸ್ತಿಯ ಜಮೀನಿನಲ್ಲಿ ಹಾಯ್ದು ಹೋಗುವ ಸರಕಾರಿ ರಸ್ತೆಯ ಅತಿಕ್ರಮಣ ಮಾಡಿರುವದನ್ನ ಪ್ರಶ್ನಿಸಿದ್ದಕ್ಕೆ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸುಮಾರು ನಾಲ್ಕಾರು ವರ್ಷಗಳ ಹಿಂದಿನಿಂದಲೂ ಬಂದಿರುವ ಭೂ ಒತ್ತುವರಿ ವಿವಾದದ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ನ್ಯಾಯ ದೊರಕಿಸುವಂತೆ ಮಹಿಳೆ ಕೇಳಿಕೊಂಡರೂ ರಾಜಕೀಯ ಒತ್ತಡದಿಂದ ನ್ಯಾಯ ದೊರೆಯಲಿಲ್ಲ ಈ ಕಾರಣದಿಂದ ನನ್ನ ತಾಯಿ ಹಾಗೂ ಅಣ್ಣತಮ್ಮಂದಿರ ಮೇಲೆ ಪದೇ ಪದೇ ಹಲ್ಲೆಗಳು ನಡೆಯುತ್ತಿದ್ದರೂ ನಮಗೆ ಯಾರೂ ಸ್ಪಂದಿಸಲಿಲ್ಲ ಇದರಿಂದ ನ್ಯಾಯಕ್ಕಾಗಿ ಮಾಧ್ಯಮದ ಮುಂದೆ ಬಂದು ನನ್ನ ಅಳಿಲನ್ನು ತೋಡಿಕೊಂಡಾಗ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ನೊಂದ ಯುವತಿ ಹೇಳಿದಳು.
ನೊಂದ ಮಹಿಳೆಯ ಸಮಸ್ಯೆಯನ್ನು ಹೋಗಲಾಡಿಸಲು ತಹಶಿಲ್ದಾರ ಎಸ್.ಬಿ ಇಂಗಳಿ, ಡಿವೈಎಎಸ್ ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಸಿಡಿಪಿಒ ಸಂಹಯಕುಮಾರ ಸದಲಗೆ ಘಟನೆ ನಡೆದ ಸ್ಥಳಕ್ಕೆ ಬಂದು ರಸ್ತೆ ಪರಿಶೀಲನೆ ಮಾಡಿದರು. ಒತ್ತುವರಿ ಮಾಡಿದ ಸ್ಥಳವನ್ನು ಭೂಮಾಪನ ಇಲಾಖೆ ವತಿಯಿಂದ ಸರ್ವೆ ಕಾರ್ಯ ಪ್ರಾರಂಬಿಸಿದರು.
ಬೆಳಗಾವಿ ಹೆಚ್ಚುವರಿ ಪೋಲಿಸ್ ಆಯುಕ್ತೆ ಶೃತಿ ಎನ್ ಎಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮಧ್ಯಾಹ್ನದಿಂದ ಸಂಜೆಯವರೆಗೆ ಹಿರಿಯ ಅಧಿಕಾರಿಗಳು ನೊಂದ ಯುವತಿ, ತಾಯಿ, ಸಹೋದರರನ್ನು ಕಾಗವಾಡ ಪೋಲಿಸ್ ಠಾಣೆಗೆ ಕರೆದುಕೊಂಡು ಅವರ ಹೇಳಿಕೆ ಪಡೆದುಕೊಂಡರು.
ನೊಂದ ಯುವತಿ ಮಾತನಾಡುತ್ತಾ, ನನ್ನ ಜಮೀನಿನ ಒತ್ತುವರಿ ಸರಿಪಡಿಸಿ ನನಗೆ ವಾಪಸ್ ನೀಡುವವರೆಗೆ ನನ್ನ ಹೋರಾಟ ಇದೆ ರೀತಿ ಮುಂದುರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ ಭೂ ಒತ್ತುವರಿ ಸರಿಪಡಿಸಲು ಭೂಮಾಪನ ಇಲಾಖೆ ಸಿಬ್ಬಂದಿಗಳನ್ನ ಕರೆದುಕೊಂಡು ಸರ್ವೆ ಕಾರ್ಯಕ್ಕೆ ನೇಮಕಾತಿ ಮಾಡಲಾಗಿದೆ. ನೊಂದ ಯುವತಿಯ ಸಮಸ್ಯೆ ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುವುದು ಎಂದು ಕಾಗವಾಡ ತಹಶಿಲ್ದಾರಾದ ಎಸ್.ಬಿ ಇಂಗಳಿ ಅವರು ತಿಳಿಸಿದ್ದಾರೆ.
ಕಾಗವಾಡ ಮತಕ್ಷೇತ್ರ ಶಾಸಕರಾದ ಭರಮಗೌಡ(ರಾಜು)ಕಾಗೆ ಅವರು ಐನಾಪುರದಲ್ಲಿ ನಡೆದ ಈ ಘಟನೆ ಬಗ್ಗೆ ಮಾಹಿತಿ ಪಡೆದು ತಪ್ಪಿಸ್ತರ ಮೇಲೆ ಸೂಕ್ತಕ್ರಮ ಜರುಗಿಸಲು ಹಿರಿಯ ಪೋಲಿಸ್ ಅಧಿಕಾರಿ ಹಾಗೂ ತಹಶಿಲ್ದಾರರಿಗೆ ಮಾಹಿತಿ ನೀಡಿದ್ದೇನೆ. ನೊಂದ ಕುಟುಂಬಕ್ಕೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸುವ ಕಾರ್ಯ ಮಾಡುತ್ತೇವೆ ಎಂದು ಹೇಳಿದ್ದಾರೆ.