Thursday, June 19, 2025
Google search engine
Homeಕ್ರೈಂಬೆಳಗಾವಿಯಲ್ಲಿ ಖತರ್ನಾಕ್ ಕಳ್ಳರಿಬ್ಬರನ್ನು ಬಂಧಿಸಿದ ಮಾಳಮರುತಿ ಠಾಣೆ ಪೊಲೀಸರು!
spot_img

ಬೆಳಗಾವಿಯಲ್ಲಿ ಖತರ್ನಾಕ್ ಕಳ್ಳರಿಬ್ಬರನ್ನು ಬಂಧಿಸಿದ ಮಾಳಮರುತಿ ಠಾಣೆ ಪೊಲೀಸರು!

ಶ್ರೀ ಯಡಾ ಮಾರ್ಟಿನ ಮಾರ್ಬನ್ಯಾಂಗ ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ, ಶ್ರೀ ರೋಹನ ಜಗದೀಶ ಮಾನ್ಯ ಉಪ-ಪೊಲೀಸ್ ಆಯುಕ್ತರು (ಕಾ&ಸು), ಶ್ರೀ ನಿರಂಜನ ಅರಸ ಮಾನ್ಯ ಉಪ-ಪೊಲೀಸ್‌ ಆಯುಕ್ತರು (ಅಪರಾಧ ಮತ್ತು ಸಂಚಾರ), ಶ್ರೀ ಸಂತೋಷ ಸತ್ಯನಾಯ್ಕ ಮಾನ್ಯ ಎ.ಸಿ.ಪಿ.ಸಾಹೇಬರು ಮಾರ್ಕೇಟ ಉಪ-ವಿಭಾಗ ಬೆಳಗಾವಿ ಇವರ ಮಾರ್ಗದರ್ಶನದಲ್ಲಿ ಶ್ರೀ ಜೆ.ಎಮ್.ಕಾಲಿಮಿರ್ಚಿ ಪೊಲೀಸ್ ಇನ್ಸಪೆಕ್ಟರ ಮಾಳಮಾರುತಿ ಪೊಲೀಸ್ ಠಾಣೆ ಬೆಳಗಾವಿ ಇವರ ನೇತೃತ್ವದಲ್ಲಿ ಬೆಳಗಾವಿ ಶಹರದ ಅಮನ ನಗರದಲ್ಲಿ ದಿನಾಂಕ: 19-01-2025 ರಂದು ರಾತ್ರಿ ವೇಳೆಯಲ್ಲಿ ಮನೆಯನ್ನು ಕಳ್ಳತನ ಮಾಡಿದ ಆರೋಪಿತನಾದ 1) ಫರ್ಹಾನ ರಿಯಾಜಅಹ್ಮದ ದಾಲಾಯತ ವಯಸ್ಸು: 22 ವರ್ಷ ಸಾ: ಗುಲಾಬ ಶಾ ಗಲ್ಲಿ ನ್ಯೂ ಗಾಂಧಿ ನಗರ ಬೆಳಗಾವಿ ಈತನಿಗೆ ಮತ್ತು ಸದರಿ ಕಳ್ಳತನ ಮಾಡಿದ ಬಂಗಾರದ ಆಭರಣಗಳನ್ನು ಇಟ್ಟುಕೊಂಡಿದ್ದ ಆರೋಪಿತನಾದ 2) ಜುಬೇರಅಹ್ಮದ ಅಬ್ದುಲರಸೀದ ದಾಲಾಯತ ವಯಸ್ಸು: 25 ವರ್ಷ ಸಾ: ನೂರಾನಿ ಮಸೀದಿ ಹತ್ತಿರ ಉಜ್ವಲ ನಗರ 8 ನೇ ಕ್ರಾಸ್ ಬೆಳಗಾವಿ ಇವರಿಗೆ ದಸ್ತಗೀರ ಮಾಡಿ ಸದರಿಯವರ ತಾಬಾದಲ್ಲಿಂದ ಸುಮಾರು 7,50,000/- ರೂ ಕಿಮ್ಮತ್ತಿನ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡು ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರಪಡಿಸಿದ್ದು ಸದರಿಯವರು ಮಾನ್ಯ ನ್ಯಾಯಾಂಗ ಬಂದನದಲ್ಲಿ ಇರುತ್ತಾರೆ.

 

ಅಲ್ಲದೇ ಸದರಿ ಆರೋಪಿತನಾದ 1) ಫರ್ಹಾನ ರಿಯಾಜಅಹ್ಮದ ದಾಲಾಯತ ವಯಸ್ಸು: 22 ವರ್ಷ ಸಾ: ಗುಲಾಬ ಶಾ ಗಲ್ಲಿ ನ್ಯೂ ಗಾಂಧಿ ನಗರ ಬೆಳಗಾವಿ ಈ ಹಿಂದೆ 2024 ನೇ ಸಾಲಿನಲ್ಲಿ ರಾಬರಿ ಕಳ್ಳತನ ಮತ್ತು ಮನೆಗಳ್ಳತನ ಪ್ರಕರಣದಲ್ಲಿ ಹಾಗೂ ಗಾಂಜಾ ಸೇವನೆ ಪ್ರಕರಣದಲ್ಲಿ ಬಾಗಿಯಾಗಿದ್ದಲ್ಲದೇ ದಿನಾಂಕ: 02-01-2025 ರಂದು ಉಜ್ವಲ ನಗರದಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಸದರಿಯವನ ಮುಂಜಾಗೃತಾ ಕ್ರಮವಾಗಿ ಪ್ರಕರಣದ ದಾಖಲಿಸಿದ್ದು ಇರುತ್ತದೆ.

ಆರೋಪಿ 2) ಜುಬೇರಅಹ್ಮದ ಅಬ್ದುಲರಸೀದ ದಾಲಾಯತ ವಯಸ್ಸು: 25 ವರ್ಷ ಸಾ: ನೂ ಮಸೀದಿ ಹತ್ತಿರ ಉಜ್ವಲ ನಗರ 8 ನೇ ಕ್ರಾಸ್ ಬೆಳಗಾವಿ ಈತನು ಸನ್-2021 ನೇ ಸಾಲಿನಲ್ಲಿ ರ ಕಳ್ಳತನ ಪ್ರಕರಣದಲ್ಲಿ ಬಾಗಿಯಾಗಿದ್ದು ಇರುತ್ತದೆ.

ಸದರಿ ಪ್ರಕರಣದ ಕಾರ್ಯಾಚರಣೆಯಲ್ಲಿ ಶ್ರೀ ಹೊನ್ನಪ್ಪ ತಳವಾರ ಪಿ.ಎಸ್.ಐ, ಶ್ರೀ ಶ್ರೀ ಹುಳಗೇರಿ ಪಿ.ಎಸ್.ಐ, ಶ್ರೀ ಉದಯ ಪಾಟೀಲ ಪಿ.ಎಸ್.ಐ, ಮತ್ತು ಸಿಬ್ಬಂದಿ ಜನರಾದ ಶ್ರೀ ಎಮ್.ಜಿ.ಕುರೇರ, ಶ್ರೀ ಸಿ.ಜೆ.ಚಿನ್ನಪ್ಪಗೋಳ, ಶ್ರೀ ಬಿ.ಎಫ್.ಬಸ್ತವಾಡ, ಶ್ರೀ ಜಗನ್ನಾಥ ಭೋಸಲೆ, ಶ್ರೀ ಬಸವರಾಜ ಕಲ್ಲಪ್ಪನವರ, ಶ್ರೀ ಸಿ.ಐ.ಚಿಗರಿ, ಶ್ರೀ ಕೆ.ಬಿ.ಗೌರಾಣಿ, ಶ್ರೀ ಮಲ್ಲಿಕಾರ್ಜುನ ಗಾಡವಿ, ಶ್ರೀ ಮಹೇಶ ಒಡೆಯರ ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ ಜನರಾದ ಶ್ರೀ ರಮೇಶ ಅಕ್ಕಿ, ಮಹಾದೇವ ಕಾಸೀದ ಮತ್ತು ಬೆರಳು ಮುದ್ರೆ ತಜ್ಞರಾದ ವಿಶ್ವನಾಥ ಮಠಪತಿ, ಬಾಹುಬಲಿ ಅಲಗಾಲೆ, ಸಂತೋಷ ಮನಕಾಪೂರೆ, ರುದ್ರಯ್ಯಾ ಹಿರೇಮಠ ಮತ್ತು ಸೋಕೋ ಅಧಿಕಾರಿಯವರಾದ ಶ್ರೀ ಹರೀಶ ಯಡ್ರಾವಿ ಇವರು ಪ್ರಶಂಸನಿಯ ಕೆಲಸ ಮಾಡಿದ್ದು ಸದರಿಯವರಿಗೆ ಮಾನ್ಯ ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.

RELATED ARTICLES
- Advertisment -spot_img

Most Popular

error: Content is protected !!