ಸಮರ್ಥ ನಾಡು, ಕನ್ನಡ ದಿನಪತ್ರಿಕೆ,
ಬೆಳಗಾವಿ: ಬೆಳಗಾವಿಯ ತಾಲೂಕಿನ ಸುಪ್ರಸಿದ್ಧ ಕ್ಷೇತ್ರವಾದ ಸುಳೇಭಾವಿ ಶ್ರೀ ಮಹಾಲಕ್ಷ್ಮಿ ದೇವಿ ಮಂದಿರದಲ್ಲಿ ಮುಂಬರುವ 2025 ರ ಜಾತ್ರಾ ಪ್ರಯುಕ್ತವಾಗಿ ಮತ್ತು ದೇವಿಯ ಪ್ರಾಭಲ್ಯತೆ ಮತ್ತು ಕ್ಷೇತ್ರದ ಮಹಿಮೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಷಯ ಹೋಮಗಳನ್ನು ಜರುಗಿಸಲಾಯಿತು.
ದೇವಿಯ ಕಾಳಾವಾಹನೆ, ಪ್ರತ್ಯಂಗಿರಾ ಹೋಮ ಹಾಗೂ ಶ್ರೀ ಭದ್ರಕಾಳಿ ಗುರುತಿ ಪೂಜೆಯನ್ನು ಕೇರಳ ಮೂಲದ ಶ್ರೀ ಭಗವತಿ ಎನ್. (ಪಾಲ್ಕಡ್ ಕೇರಳ) ಇವರ ನೇತೃತ್ವದಲ್ಲಿ ಹಾಗೂ ಪೂಜಾರಿಗಳು ಮತ್ತು ಟ್ರಸ್ಟ್ ಕಮಿಟಿ ಅವರಿಂದ ನೆರವೇರಿಸಲಾಯಿತು.
ದೇವಿಯ ಭಕ್ತಾದಿಗಳು ಮತ್ತು ಗ್ರಾಮದ ಸಮಸ್ತ ಗುರು ಹಿರಿಯರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಟ್ರಸ್ಟ್ ಮತ್ತು ಪೂಜಾರಿಗಳಿಂದ ಕೇರಳ ಮೂಲದ ಶ್ರೀ ಭಗವತಿ ಎನ್. (ಪಾಲ್ಕಡ್ ಕೇರಳ) ಅವರ ಪೂಜಾರಿಗಳಿಗೆ ಅಮ್ಮನವರ ಭಾವಚಿತ್ರ ನೀಡಿ ಗೌರವಿಸಲಾಯಿತು.
******