Friday, June 20, 2025
Google search engine
Homeಸುದ್ದಿಸ್ವಾತಂತ್ರ ಹೋರಾಟದಲ್ಲಿ ಅಥಣಿಯ ಪಾತ್ರ ಮಹತ್ವದಾಗಿದೆ :- ಶಾಸಕ ಲಕ್ಷ್ಮಣ ಸವದಿ
spot_img

ಸ್ವಾತಂತ್ರ ಹೋರಾಟದಲ್ಲಿ ಅಥಣಿಯ ಪಾತ್ರ ಮಹತ್ವದಾಗಿದೆ :- ಶಾಸಕ ಲಕ್ಷ್ಮಣ ಸವದಿ

ಸಮರ್ಥನಾಡು, ದಿನಪತ್ರಿಕೆ

ಅಥಣಿ:- ಸ್ವಾತಂತ್ರ ಹೋರಾಟದಲ್ಲಿ ಅಥಣಿಯ ಪಾತ್ರ ಮಹತ್ವದಾಗಿದೆ , ಸ್ವತಂತ್ರ ಹೋರಾಟಗಾರರಿಗೆ ಗುಂಡೆವಾಡಿಯ ಗೊಲಭಾವಿಯ ಅವರ ಊಟ ಹಾಗೂ ವಸತಿ ನೀಡಿ ಸಹಕರಿಸಿದರು , ಕೊಟ್ಟಲಗಿ ಭಾಗದಲ್ಲಿ ಆಗಿನ ಕಾಲದಲ್ಲಿ ಬ್ರಿಟಿಷ್ ವಿರುದ್ದ ಹೋರಾಡಲು ಪಿಸ್ತೂಲಗಳನ್ನ ತಯಾರಸಿ ಕೊಟ್ಟರು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು .

ಅಥಣಿ ಪಟ್ಟಣದಲ್ಲಿ ಜರುಗಿದ 78 ನೇ ಸ್ವಾತಂತ್ರ್ಯೊತ್ಸವದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು , ಬ್ರಿಟಿಷ್ ವಿರುದ್ದ ಹೋರಾಟದಲ್ಲಿ ತೆಲಸಂಗದ ಹಳಿಂಗಳಿಯವರು ಹೋರಾಟ ಮಾಡಿದ್ದಾರೆ ಎಂದು ಹೇಳಿದರು.

ಅಥಣಿ ಪಟ್ಟಣದ ಸಮಸ್ತ ಅಬಿವೃದ್ದಿಗೆ ನಾನು ಬದ್ದನಾಗಿದ್ದೇನೆ ಕಳೆದ ವರ್ಷ ಹೇಳಿದಂತೆ ಅಥಣಿ ಪಟ್ಟಣಕ್ಕೆ 24×7 ಕುಡಿಯುವ ನೀರಿನ ಯೋಜನೆ ನನಸಾಗಿದೆ ಎರಡು ವರ್ಷದಲ್ಲಿ ಪ್ರತಿ ಮನೆಗೆ ನೀರು ಸರಭರಾಜು ಆಗುತ್ತೆ , ಅದರಂತೆ ರಾಜಕೀಯ ಬದುಕಿನ ಒಂದು ಆಸೆ ಅಥಣಿ ಮತಕ್ಷೇತ್ರವನ್ನ ನೀರಾವರಿ ಮಾಡುವದು ಅದಕ್ಕೆ ಸರಕಾದಿಂದ ೧೫೦೦ ಕೋಟಿ ಅನುದಾನದಲ್ಲಿ ಅಮ್ಮಾಜೇಶ್ವರಿ ಏತನಿರಾವರಿ ಯೋಜನೆ ಶುರುವಾಗಿದೆ ,ಸ್ವಲ್ಪ ದಿನದಲ್ಲಿ ಅಥಣಿ ಮತಕ್ಷೇತ್ರ ಸಂಪೂರ್ಣವಾಗಿ ನೀರಾವರಿ ಆಗುತ್ತದೆ ಎಂದು ಹೇಳಿದರು .

ಈ ವೇಳೆ ತಹಶಿಲ್ದಾರ ದಿನೇಶಕುಮಾರ ಮಿನಾ ದ್ವಜಾರೋಹನ ನೇರವೆರಿಸಿದರು , ಪಥ ಸಂಚಲನದಲ್ಲಿ ಪ್ರಥಮ ಸ್ಥಾನ ಕಾಶಿಬಾಯಿ ಚಿಕ್ಕಟ್ಟಿ ಆಂಗ್ಲ ಮಾದ್ಯಮ ಶಾಲೆ , ಎರಡನೆಯ ಬಹುಮಾನ ಆದರ್ಶ ಆಂಗ್ಲ ಮಾದ್ಯಮ ಶಾಲೆ , ಮೂರನೆಯ ಬಹುಮಾನ ಅಥಣಿ ವಿದ್ಯಾವರ್ಧಕ ಶಾಲೆ ಪಡೆದುಕೊಂಡಿತ್ತು .

ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಮೊದಲ ಬಹುಮಾನ 1 ಲಕ್ಷ ಎರಡನೆ ಬಹುಮಾನ 50 ಸಾವಿರ ಮೂರನೆಯ ಬಹುಮಾನ 25000 ರೂಪಾಯಿ ಶಾಸಕ ಲಕ್ಷ್ಮಣ ಸವದಿ ನೀಡಿದರು .

ಈ ವೇಳೆ ತಾಲೂಕಾ ಪಂಚಾಯತ ಆಡಳಿತ ಅದಿಕಾರಿ ಬಸವರಾಜ ಹೆಗ್ಗನಾಯಿಕ, ಡಿವಾಯ್ ಎಸ್ಪಿ ಶ್ರೀಪಾದ ಜಲ್ದೆ , ಕಾರ್ಯನಿರ್ವಾಹಕ ಅದಿಕಾರಿ ಶಿವಾನಂದ ಕಲ್ಲಾಪುರ , ಸಮಾಜ ಕಲ್ಯಾಣ ಇಲಾಖೆ ಅದಿಕಾರಿ ಬಸವರಾಜ ಯಾದವಾಡ , ಪುರಸಭೆ ಮುಖ್ಯಾದಿಕಾರಿ ಅಶೋಕ ಗುಡಿಮನಿ , ಗ್ರೇಡ್ 2 ತಹಶಿಲ್ದಾರ ಶ್ರೀಶೈಲ ಗುಡಮೆ ,ರಾಜಕೀಯ ನಾಯಕರು ಪುರಸಭೆ ಸದಸ್ಯರು ಸೇರಿದಂತೆ ಅನೇಕರು ಹಾಜರಿದ್ದರು , ಸಂಗಮೇಶ ಹಚ್ಚಡದ ನಿರೂಪಿಸಿದರು , ಬಿಇಓ ಎಂ.ಬಿ.ಮೊರಟಗಿ ಸ್ವಾಗತಿಸಿದರು .

                    ವರದಿ: ಅಜಿತ್ ಕಾಂಬಳೆ

RELATED ARTICLES
- Advertisment -spot_img

Most Popular

error: Content is protected !!