ನಿಯತಿ ಫೌಂಡೇಶನನಿಂದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗೆ ಪುರಸ್ಕಾರ..
ವಿದ್ಯಾರ್ಥಿವೇತನ ವಿತರಿಸಿದ ಡಾ.ಸೋನಾಲಿ ಸರ್ನೋಬತ್..
ಬೆಳಗಾವಿ : ನಗರದಲ್ಲಿ ಇಂದು ಶನಿವಾರ ನಿಯತಿ ಫೌಂಡೇಶನ ಕಡೆಯಿಂದ, 6000ರೂ ಹಣವನ್ನು ವಿದ್ಯಾರ್ಥಿ ವೇತನವಾಗಿ ಅರುಷ್ ಅಷ್ಟೇಕರ ಎಂಬ ವಿದ್ಯಾರ್ಥಿಯ ಶಿಕ್ಷಣಕ್ಕಾಗಿ ಚೆಕ್ ಮೂಲಕ ನೀಡಲಾಗಿದೆ..
ಈ ವಿದ್ಯಾರ್ಥಿಯು ಬೆಳಗಾವಿಯ ವನಿತಾ ವಿದ್ಯಾಲಯದಲ್ಲಿ ವಿಧ್ಯಾಭ್ಯಾಸ ಮಾಡುತ್ತಿದ್ದು,
ಇತ್ತೀಚೆಗಷ್ಟೇ ತಂದೆಯನ್ನು ಕಳೆದುಕೊಂಡಿದ್ದಾನೆ, ಆತನ ಜಾವಾಬ್ದಾರಿ ವಹಿಸಿಕೊಳ್ಳಲು ಯಾರೂ ಇಲ್ಲದ ಕಾರಣ ಅಜ್ಜ-ಅಜ್ಜಿ ನೋಡಿಕೊಳ್ಳುತ್ತಿದ್ದಾರೆ.
ಇದನ್ನರಿತ ಡಾ ಸೋನಾಲಿ ಸರ್ನೋಬತ್ ಅವರು ಬಡ ವಿದ್ಯಾರ್ಥಿಗೆ ಸಹಾಯ ಆಗಲೆಂದು ಚೆಕ್ ಹಸ್ತಾಂತರಿಸಿದ್ದಾರೆ..
ಈ ವೇಳೆ ಗೀತಾಂಜಲಿ ಚೌಗುಲೆ, ವನಿತಾ ಹುಂಡಾರೆ, ವೃಶಾಲಿ ಮೋರೆ, ಆಶಾರಾಣಿ ನಿಂಬಾಳಕರ, ದೀಪಾಲಿ ಮಾಲಕರಿ ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..