ಸಮರ್ಥ ನಾಡು, ಕನ್ನಡ ದಿನ ಪತ್ರಿಕೆ,
ಬೆಳಗಾವಿ ಆಗಷ್ಟ್.20 : ಗ್ರಾಮಿಣಾಭಿವೃದ್ದಿ ಮತ್ತು ಜಿಲ್ಲಾ ಪಂಚಾಯತ ಅಬ್ದುಲ್ ನಜೀರ್ಸಾಬ್ ತರಬೇತಿ ಕೆಂದ್ರ ಇವರ ಸಂಯುಕ್ತ ಆಶ್ರಯದಲ್ಲಿ (ಮಂಗಳವಾರ) ಆ.20 ಮಚ್ಚೆ ಸಂಪನ್ಮೂಲ್ ಕೆಂದ್ರದಲ್ಲಿ ಎನ್ ಆರ್ಎಲ್ಎಮ್ ಸಂಜಿವಿನಿ ಯೋಜನೆಯ ಎಮ್ಬಿಕೆ 5 ದಿನಗಳ ವಸತಿ ಸಹಿತ ತರಬೇತಿ ಕಾರ್ಯಾಗಾರ ಜರುಗಿತು.
ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆಯರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಹಣಕಾಸಿನ ನೆರವು ನೀಡುತ್ತಿದೆ.
ಸರ್ಕಾರದ ಎನ್ಆರ್ಎಲ್ಎಮ್ ಸಂಜೀವಿನಿ, ಎಸ್ಎಚ್ಜಿಗಳ ಸದುಪಯೋಗ ಪಡೆದುಕೊಳ್ಳಬೇಕು. ಈ ತರಬೇತಿಯಿಂದಾಗಿ ಮಹಿಳೆಯರು ಸಾಮಾಜಿಕ ಮತ್ತು ಆರ್ಥಿಕವಾಗಿ ಸಧೃಢರಾಗಿ ಸಮಾಜದಲ್ಲಿ ಮುಂದೆ ಬರಬೇಕು ಎಂದರು.
ಸರ್ಕಾರವು ಬಡ ಕುಟುಂಬದ ಆರ್ಥಿಕ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಇವುಗಳ ಸದುಪಯೋಗ ಪಡೆದುಕೊಂಡು ಸಮಾಜದ ಮುನ್ನಡೆಗೆ ಬರಬೇಕು ಎಂದು ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಡಿಪಿಆರ್ಸಿ ಆಡಳಿತ ಸಹಾಯಕಿ ಮಂಜುಳಾ ಹೊನಕಟ್ಟಿ, ಸೋನು ಮುತ್ನಾಳ, ಸುಮನ, ಗಿಜ್ಜನ್ನವರ, ಉಮಾ ಪಾಟೀಲ, ಗೀತಾ ಕಾಂಬಳೆ, ರಾಧಾ ಇಂಗಳೆ, ಶೃತಿ ಹವಾಲ್ದಾರ, ಶಿಲ್ಪಾ ಡಂಗ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಅತಿಥಿಗಳನ್ನು ಅರ್ಚನಾ ಕಾಂಬಳೆ ಅವರು ಸ್ವಾಗತಿಸಿದ್ದರು. ಮಾಧುರಿ ತಾರದಾಳೆ ವಂದನರ್ಪಣೆಯನ್ನು ಮಾಡಿದ್ದರು. ರೇಣುಕಾ ಕಾಂಬಳೆ ಅವರು ಕಾರ್ಯಕ್ರವನ್ನು ನಿರೂಪಿಸಿದರು.
***